ಸಂಚಾರ ನಿಯಮ ಕಾರ್ಯಾಗಾರ

0
8

ಪ್ರೇರಣಾ ಶೈಕ್ಷಣಿಕ ಸೇವಾ ಸಂಸ್ಥೆ ಬೈಂದೂರು, ಶಾಲಾ ಶಿಕ್ಷಣ ಇಲಾಖೆ ಬೈಂದೂರು, ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ, ಸಮೃದ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು, ಜೋಗಿ ಮನೆ ಟ್ರಸ್ಟ್ ಹಳಗೇರಿ ಹಾಗು ಜೆಸಿಐ ಕುಂದಾಪುರ ಸಿಟಿ

ಇವರ ಸಹ ಯೋಗದೊಂದಿಗೆ ಬೈಂದೂರು ವಲಯದ ಶಾಲಾ ವಾಹನಗಳ ಚಾಲಕರು ಹಾಗು ಕಂಡಕ್ಟರ್ ರವರಿಗೆ ಸಂಚಾರ ನಿಯಮ ಕಾರ್ಯಾಗಾರವು ಬೈಂದೂರು ತಾಲೂಕಿನ ಹಳಗೇರಿ ಗ್ರಾಮ ದ ಉಪ್ರಳ್ಳಿ ಯಾ ಶ್ರೀ ಕಾಳಿಕಾಂಬಾ ಸಭಾ ಭವನ ದಲ್ಲಿ ಜೆಸಿಐ ಇಂಡಿಯಾ ದ ರಾಷ್ಟ್ರೀಯ ತರಬೇತಿ ಧಾರ ಜೇಸಿ ದೀಪಕ ರಾಜ್ ಮಂಗಳೂರು ಇವರು ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿದರು.

ಸಂಚಾರ ನಿಯಮ ಕಾರ್ಯಾಗಾರ ವನ್ನು ಬೈಂದೂರು ವಿಧಾನ ಸಭಾ ಕ್ಷೆತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು,

ಸಮಾರಂಭ ದ ಅಧ್ಯಕ್ಷ ತೇ ಯನ್ನು ಬೈಂದೂರು ವಲಯದ ಶಿಕ್ಷಣಧಿಕಾರಿ ನಾಗೇಶ್ ನಾಯಕ್ ವಹಿಸಿದರು.
ಸಮಾರಂಭ ದಲ್ಲಿ ಶ್ರೀ ಕ್ಷೆತ್ರಾ ಉಪ್ರಳ್ಳಿ ಇದರ ಧರ್ಮದರ್ಶಿ ಯವರಾದ ಚಂದ್ರಯ್ಯ ಆಚಾರ್ಯ, ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಯಾದ ಹುಸೇನ್ ಹೈಕಾಡಿ, ಶ್ರೀ ಕಾಳಿಕಾಂಬಾ ಎಜುಕೇಷನ್ ನ ಅಧ್ಯಕ್ಷ ರಾದ ಸುಧಾಕರ ಆಚಾರ್ಯ, ಜೋಗಿ ಮನೆ ಟ್ರಸ್ಟ್ ನ ಅಧ್ಯಕ್ಷ ರಾದ ವಸಂತ ಜೋಗಿ, ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ಸಂತೋಷ್ ಪೂಜಾರಿ,ಶ್ರೀಮತಿ ದೇವಕ್ಕಿ ಬಾರ್ಕುರ್ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಜೇಸಿ ಕಿರಣ್ ದೇವಾಡಿಗ, ನಿಕಟ ಪೂರ್ವ ಅಧ್ಯಕ್ಷ ರಾದ ಯೂಸುಫ್ ಸಲೀಮ್, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು ಸದ್ಯಸ್ಯರಾದ ಸರ್ವೋತ್ತಮ ಭಟ್ ಇನ್ನಿತರರು ಉಪಸ್ಥಿತರಿದ್ದರು.

ಪ್ರೇರಣಾ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷೆ ಸುಮಾ ಆಚಾರ್ ಸ್ವಾಗತಿಸಿದರು
ಪ್ರೇರಣಾ ಶೈಕ್ಷಣಿಕ ಸೇವಾ ಸಂಸ್ಥೆ ಯಾ ಕಾರ್ಯದರ್ಶಿ ದಿನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here