ಮಳೆಗಾಲ ಮತ್ತು ರೋಗನಿರೋಧಕ ಶಕ್ತಿ: ಮಳೆಗಾಲದಲ್ಲಿ ವಿಟಮಿನ್ C ಏಕೆ ಮುಖ್ಯ?

0
6


ಮಳೆಗಾಲವು ಬೇಸಿಗೆಯ ಬಿಸಿಲಿನಿಂದ ಬಹುನಿರೀಕ್ಷಿತ ಪರಿಹಾರವನ್ನು ನೀಡುತ್ತದೆ. ಆದರೆ ಇದೇ ಸಮಯದಲ್ಲಿ ಸಾಮಾನ್ಯ ಕಾಯಿಲೆಗಳಿಗೆ ನಾವು ಹೆಚ್ಚು ಒಳಗಾಗುವ ಸಾಧ್ಯತೆಯೂ ಇರುತ್ತದೆ. ಹೆಚ್ಚಿದ ತೇವಾಂಶ, ತಾಪಮಾನದಲ್ಲಿನ ಬದಲಾವಣೆಗಳು ಮತ್ತು ನೀರು ನಿಲ್ಲುವ ಪರಿಸ್ಥಿತಿಗಳು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಬಹುದು. ಇದರಿಂದ ಸೋಂಕುಗಳ ಅಪಾಯ ಹೆಚ್ಚಾಗಬಹುದು. ಮಳೆಗೆ ಒಡ್ಡಿಕೊಳ್ಳುವ ಜನರಲ್ಲಿ ಉಸಿರಾಟದ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
ತಂಪಾದ ಮತ್ತು ತೇವಾಂಶಭರಿತ ವಾತಾವರಣವು ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಈ ಕಾರಣದಿಂದ ಮಳೆಗಾಲದಲ್ಲಿ ಶೀತ, ಕೆಮ್ಮು, ಅಲರ್ಜಿ ಹಾಗೂ ಚರ್ಮದ ಸೋಂಕುಗಳು ಹೆಚ್ಚು ಸಾಮಾನ್ಯವಾಗಬಹುದು. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ವಿಶೇಷವಾಗಿ ಮುಖ್ಯ. ಸಮತೋಲಿತ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ಅಗತ್ಯ ಪ್ರಮಾಣದ ನಿದ್ರೆ ಪಡೆಯುವುದು ಮತ್ತು ಉತ್ತಮ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತಹ ಸರಳ ಅಭ್ಯಾಸಗಳು ಇಡೀ ಋತುವಿನಲ್ಲಿ ಆರೋಗ್ಯವಾಗಿರಲು ಬಹಳಷ್ಟು ಸಹಾಯ ಮಾಡಬಹುದು.
ಮಳೆಗಾಲದಲ್ಲಿ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಏಕೆ ಹೆಚ್ಚು ಕಾಣಿಸಿಕೊಳ್ಳುತ್ತವೆ?
ಮಳೆಗಾಲದಲ್ಲಿ ಸೋಂಕುಗಳು ಸುಲಭವಾಗಿ ಹರಡಲು ಅನುಕೂಲವಾಗುವ ಪರಿಸ್ಥಿತಿಗಳು ಉಂಟಾಗಬಹುದು. ಕಲುಷಿತ ಆಹಾರ ಮತ್ತು ನೀರು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ನಿಂತಿರುವ ನೀರು ಹಾಗೂ ದೀರ್ಘಕಾಲ ತೇವಾಂಶದ ವಾತಾವರಣಕ್ಕೆ ಒಡ್ಡಿಕೊಳ್ಳುವುದು, ಇವೆಲ್ಲವೂ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಹೆಚ್ಚಿಸಬಹುದು.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಲವು ಆರೋಗ್ಯ ಸಮಸ್ಯೆಗಳು:
• ಶೀತ, ಕೆಮ್ಮು ಮತ್ತು ಇತರ ಉಸಿರಾಟದ ಸೋಂಕುಗಳು
• ವೈರಲ್ ಜ್ವರಗಳು
• ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸೋಂಕುಗಳು
• ಋತುಮಾನಕ್ಕೆ ಸಂಬಂಧಿಸಿದ ಅಲರ್ಜಿಗಳು
• ಚರ್ಮದ ಸೋಂಕುಗಳು ಮತ್ತು ಶಿಲೀಂಧ್ರದ ಸೋಂಕುಗಳು
ಲೈಫ್‌ಕೇರ್ ಹಾಸ್ಪಿಟಲ್ & ರಿಸರ್ಚ್ ಸೆಂಟರ್‌ನ ಹಿರಿಯ ಸಲಹೆಗಾರ ವೈದ್ಯರು ಹಾಗೂ ಡಯಾಬೆಟಾಲಜಿಸ್ಟ್ ಪ್ರೊ. (ಡಾ.) ಎಲ್. ಶ್ರೀನಿವಾಸಮೂರ್ತಿ ಅವರ ಪ್ರಕಾರ, “ಮಳೆಗಾಲದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ಮತ್ತು ರೋಗಾಣುಗಳಿಗೆ ಹೆಚ್ಚಿದ ಒಡ್ಡಿಕೊಳ್ಳುವಿಕೆಯಿಂದ ಸಾಮಾನ್ಯ ಸೋಂಕುಗಳ ಅಪಾಯ ಹೆಚ್ಚಾಗಬಹುದು. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗಿದ್ದರೂ, ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಅವುಗಳನ್ನು ಬಹುತೇಕ ತಡೆಯಬಹುದು. ತಾಜಾ ತಯಾರಿಸಿದ ಆಹಾರ ಸೇವಿಸುವುದು, ಶುದ್ಧ ನೀರು ಕುಡಿಯುವುದು, ಉತ್ತಮ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಸಮತೋಲಿತ, ಪೌಷ್ಟಿಕ ಆಹಾರವನ್ನು ಸೇವಿಸುವುದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಇಡೀ ಋತುವಿನಲ್ಲಿ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.”
ಅಬಾಟ್ ಇಂಡಿಯಾದ ಮೆಡಿಕಲ್ ಅಫೇರ್ಸ್‌ನ ಅಸೋಸಿಯೇಟ್ ಡೈರೆಕ್ಟರ್ ಡಾ. ಅಂಕಿತ್ ರೈ ಅವರು ಹೇಳಿದರು:
“ವಿಟಮಿನ್ C ಒಂದು ಅಗತ್ಯ ಪೋಷಕಾಂಶವಾಗಿದ್ದು, ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ, ಆರೋಗ್ಯಕರ ಚರ್ಮಕ್ಕಾಗಿ ಕೊಲಾಜನ್ ಉತ್ಪಾದನೆಗೆ ಸಹಕಾರ ನೀಡುತ್ತದೆ ಮತ್ತು ಆ್ಯಂಟಿಆಕ್ಸಿಡೆಂಟ್ ರಕ್ಷಣೆಯನ್ನು ಒದಗಿಸುತ್ತದೆ. ಸಮತೋಲಿತ ಆಹಾರದ ಭಾಗವಾಗಿ ವಿಟಮಿನ್ C ಅನ್ನು ಸೇರಿಸುವುದರಿಂದ ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಒಟ್ಟಾರೆ ಕ್ಷೇಮಕ್ಕೆ ಕೊಡುಗೆ ನೀಡಲು ಸಹಾಯ ಮಾಡಬಹುದು.”
ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು
ಕೆಲವು ಸರಳ ದೈನಂದಿನ ಅಭ್ಯಾಸಗಳು ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು:
• ಉತ್ತಮ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಮತ್ತು ನಿಯಮಿತವಾಗಿ ಕೈಗಳನ್ನು ತೊಳೆಯಿರಿ.
• ಶುದ್ಧ, ಕುದಿಸಿದ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಸಾಕಷ್ಟು ನೀರಿನಾಂಶವನ್ನು ಕಾಪಾಡಿಕೊಳ್ಳಿ.
• ತಾಜಾ ತಯಾರಿಸಿದ, ಸಮತೋಲಿತ ಆಹಾರವನ್ನು ಸೇವಿಸಿ. ಇದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ನೆಲ್ಲಿಕಾಯಿ, ಪೇರಳೆ, ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂನಂತಹ ವಿಟಮಿನ್ C ಸಮೃದ್ಧ ಆಹಾರಗಳನ್ನು ಆಹಾರದಲ್ಲಿ ಸೇರಿಸಬಹುದು.
• ದೈಹಿಕವಾಗಿ ಸಕ್ರಿಯರಾಗಿರಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ.
• ಶಿಲೀಂಧ್ರದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಚರ್ಮವನ್ನು ಸ್ವಚ್ಛವಾಗಿ ಮತ್ತು ಒಣವಾಗಿರಿಸಿಕೊಳ್ಳಿ.
ಅದೇ ಸಮಯದಲ್ಲಿ, ಈ ಕ್ರಮಗಳನ್ನು ಪಾಲಿಸುವುದೂ ಮುಖ್ಯ:
• ತೊಳೆಯದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಿ.
• ಬಾಸಿಯಾದ ಅಥವಾ ಸರಿಯಾಗಿ ಸಂಗ್ರಹಿಸದ ಆಹಾರವನ್ನು ಸೇವಿಸಬೇಡಿ.
• ಆಗಾಗ್ಗೆ ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದನ್ನು ಮಿತಿಗೊಳಿಸಿ.
• ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.
ಈ ಮಳೆಗಾಲದಲ್ಲಿ ಉತ್ತಮ ಆರೋಗ್ಯದತ್ತ
ಮಳೆಗಾಲದಲ್ಲಿ ಸಾಮಾನ್ಯ ಕಾಯಿಲೆಗಳ ಅಪಾಯ ಹೆಚ್ಚಾಗಬಹುದಾದರೂ, ಕೆಲವು ಆರೋಗ್ಯಕರ ಅಭ್ಯಾಸಗಳು ಆರೋಗ್ಯವಾಗಿರಲು ಬಹಳಷ್ಟು ಸಹಾಯ ಮಾಡಬಹುದು. ಉತ್ತಮ ಪೋಷಣೆಯುಳ್ಳ ಆಹಾರ, ನಿಯಮಿತ ವ್ಯಾಯಾಮ, ಸರಿಯಾದ ವೈಯಕ್ತಿಕ ಸ್ವಚ್ಛತೆ ಮತ್ತು ಸಾಕಷ್ಟು ವಿಶ್ರಾಂತಿ ಇವೆಲ್ಲವೂ ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಸಮತೋಲಿತ ಆಹಾರದ ಭಾಗವಾಗಿ ವಿಟಮಿನ್ C ಅನ್ನು ಸೇರಿಸುವುದರಿಂದ ರೋಗನಿರೋಧಕ ಆರೋಗ್ಯ ಮತ್ತು ಚರ್ಮದ ಆರೋಗ್ಯವನ್ನು ಮತ್ತಷ್ಟು ಬೆಂಬಲಿಸಬಹುದು. ಇದು ಮಳೆಗಾಲದುದ್ದಕ್ಕೂ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.