ಬ್ಯಾಂಕ್ ಆಫ್ ಬರೋಡಾ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ

0
47

ಮುಂಬೈಯ ಬ್ಯಾಂಕ್ ಆವರಣದಲ್ಲಿ 6,000 ಚ. ಅಡಿ ವ್ಯಾಪ್ತಿಯ ಹಸಿರು ವಲಯವಾದ “ಬಾಬ್ ಫಾರೆಸ್ಟ್” ಉದ್ಘಾಟನೆ – ನಗರ ಜೀವ ವೈವಿಧ್ಯತೆಯನ್ನು ಉತ್ತೇಜಿಸಲು

ಮುಂಬೈ,5:ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲೊಂದು ಆಗಿರುವ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್), 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪರಿಸರ ಸ್ಥಿರತೆ, ದೃಢ ಭದ್ರತಾ ಅಭ್ಯಾಸಗಳು ಮತ್ತು ರಾಷ್ಟ್ರೀಯ ಹೆಮ್ಮೆ ಕೇಂದ್ರೀಕರಿಸಿದ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಿಸಿತು. ಬ್ಯಾಂಕಿನ ಕಾರ್ಪೊರೇಟ್ ಕಚೇರಿ, ಮುಂಬೈಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೇವದತ್ತ ಚಾಂದ್, ಕಾರ್ಯನಿರ್ವಾಹಕ ನಿರ್ದೇಶಕರು ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಆ ದಿನದ ಪ್ರಮುಖ ಆಕರ್ಷಣೆಯೆಂದರೆ “ಬಾಬ್ ಫಾರೆಸ್ಟ್’ ಉದ್ಘಾಟನೆ ಮುಂಬೈ ಬಾಂದ್ರಾ ಕುರ್ಳಾ ಕಾಂಪ್ಲೆಕ್ಸ್ (BKC)ದಲ್ಲಿರುವ ಬ್ಯಾಂಕ್ ಆವರಣದಲ್ಲಿ ನಿರ್ಮಿಸಲಾದ ಈ 6,000 ಚ. ಅಡಿ ಹಸಿರು ವಲಯವು ನಗರ ಜೀವ ವೈವಿಧ್ಯತೆಯನ್ನು ಪೋಷಿಸುವ ಉದ್ದೇಶ ಹೊಂದಿದೆ.
ಬಾಬ್ ಫಾರೆಸ್ಟ್‌ ನಲ್ಲಿ ಸಾಹ್ಯಾದ್ರಿ ಪರ್ವತಶ್ರೇಣಿ ಹಾಗೂ ಪಶ್ಚಿಮ ಮಹಾರಾಷ್ಟ್ರ ಪ್ರದೇಶದ ಮೂಲದ 100 ಕ್ಕೂ ಹೆಚ್ಚು ಸ್ಥಳೀಯ ಮರಗಳು ಮತ್ತು ಗಿಡಗಳು, ಮಳೆಯ ನೀರಿನ ಸಂಗ್ರಹಣಾ ವ್ಯವಸ್ಥೆ, ಕಾಂಪೋಸ್ಟ್ ಆಧಾರಿತ ಮಣ್ಣಿನ ಸುಧಾರಣೆ, ಪರಿಸರ ಸ್ನೇಹಿ ಕುಳಿತಜ್ಞಗಳು ಮತ್ತು ನಡಿಗೆಯ ದಾರಿಗಳು ಇದ್ದು, ನೈಸರ್ಗಿಕ ಸಂಪರ್ಕವನ್ನು ಉದ್ಯೋಗಿಗಳು ಮತ್ತು ಅತಿಥಿಗಳಿಗೆ ಉತ್ತೇಜಿಸುತ್ತದೆ. ಇದಲ್ಲದೆ ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಗಜಿಬೋ, ಆಮ್ಲಜನಕ ಉತ್ಪಾದಕಗಳು ಹಾಗೂ ಬಯೋ-ಗ್ಯಾಸ ಘಟಕವನ್ನು ಒಳಗೊಂಡಿದೆ. ಇದು ಬ್ಯಾಂಕಿನ ಪರಿಸರ ಗುರಿಗಳತ್ತದ ಬದ್ಧತೆಯನ್ನು ತೋರಿಸುತ್ತವೆ.

ಅದೇ ರೀತಿ, ಬ್ಯಾಂಕ್ ಆಫ್ ಬರೋಡಾ ತನ್ನ ನವೀಕರಿಸಿದ ಭದ್ರತಾ ಸಂಗ್ರಹಿತ ಪುಸ್ತಕ (Security Compendium) ಅನ್ನು ಬಿಡುಗಡೆ ಮಾಡಿತು. ಈ ಪ್ರಮುಖ ದಾಖಲೆ ಬ್ಯಾಂಕಿನ ಇತ್ತೀಚಿನ ಆಂತರಿಕ ಭದ್ರತಾ ಮಾರ್ಗಸೂಚಿಗಳನ್ನು ಒಟ್ಟುಗೂಡಿಸುತ್ತದೆ -ಭೌತಿಕ ಭದ್ರತೆ, ಕಾರ್ಯಾಚರಣಾ ಅಪಾಯ, ತುರ್ತು ಪ್ರತಿಕ್ರಿಯಾ ಕ್ರಮಗಳು ಹಾಗೂ ನವೀಕರಿಸಿದ ನಿಯಂತ್ರಣ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಈ ದಸ್ತಾವೇಜಿನ ಉದ್ದೇಶ ಎಲ್ಲ ಶಾಖೆಗಳು ಮತ್ತು ಕಚೇರಿಗಳಲ್ಲಿ ಎಚ್ಚರಿಕೆಯ ಮತ್ತು ಸಿದ್ಧತೆಯ ಸಂಸ್ಕೃತಿಯನ್ನು ಉತ್ತೇಜಿಸುವುದು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೇವದತ್ತ ಚಾಂದ್ ಹೇಳಿದರು;

“ಸ್ವಾತಂತ್ರ ದಿನವು ನಮ್ಮ ದೇಶದತ್ತ ನವೀಕೃತ ಪ್ರತಿಜ್ಞೆಯನ್ನು ಮಾಡುವ, ಏಕತೆ, ಶಕ್ತಿ ಮತ್ತು ಪ್ರಗತಿಯ ಮೌಲ್ಯಗಳನ್ನು ಪುನಃಸ್ಮರಿಸುವ ಉತ್ತಮ ಅವಕಾಶವಾಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ನಾವು ಈ ಮೌಲ್ಯಗಳನ್ನು ಪ್ರತಿದಿನವೂ ಅಳವಡಿಸಿಕೊಂಡು, ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಿ, ದೇಶದ ಬೆಳವಣಿಗೆಗೆ ಕೊಡುಗೆ ನೀಡುತ್ತೇವೆ. ಈ ವರ್ಷ, ನಾವು ನಮ್ಮ ಪರಿಸರ ಯಾತ್ರೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ – ನಮ್ಮ ನಗರ ಹಸಿರುಕರಣದ ಪ್ರಯತ್ನಗಳ ಮೂಲಕ.”ದೆಶದಾದ್ಯಂತ ಬರೋಡಿಯನ್ನರು “ಹರ್ ಘರ್ ತಿರಂಗಾ” ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು, ತಮ್ಮ ಮನೆ ಹಾ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ, ಸಮೂಹಭಾವನೆಯ ದೇಶಭಕ್ತಿಯನ್ನು ಆಚರಿಸಿದರು.

LEAVE A REPLY

Please enter your comment!
Please enter your name here