ಮೂಡುಬಿದಿರೆ: ಕಾರ್ಕಳ ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿಯಲ್ಲಿ ಆ. ೧೬ರಂದು ನಡೆದಿದ್ದ ಭೀಕರ ರಸ್ತೆ ಅಪಘಾತದ ಗಾಯಾಳು ಸಂದೀಪ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಟ್ಟಿರುವುದಾಗಿ ತಿಳಿದು ಬಂದಿದೆ.
ಕಾರು ಡಿವೈಡರ್ ಗೆ ಹೊಡೆದು ಘಟನೆ ಸಂಭವಿಸಿದ್ದು, ವೇಣೂರು ಪೆರ್ಮುಡ ನಿವಾಸಿ ಸುಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸಂದೀಪ್ ಸೊಂಟದ ಭಾಗಕ್ಕೆ ತೀವ್ರ ತರಹದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಪೋಷಕರ ಆಂಕ್ರದನ ಮುಗಿಲುಮುಟ್ಟಿದೆ.

