ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 12 ಜನ ಫಲಾನುಭವಿಗಳಿಗೆ ರೂ.3,70,575 ಪರಿಹಾರ ಧನವನ್ನು ಅರ್ಜಿದಾರರ ಖಾತೆಗೆ ಬಿಡುಗಡೆ ಮಾಡಲಾಗಿದೆ.
ಅನಂತಮಲ್ಯ ಉಡುಪಿ ಇವರಿಗೆ ರೂ.60,454/-, ಜುಲ್ಪಾ ಹಲೀಮಾ ಇವರಿಗೆ ರೂ. 54,680/-, ಉಮೇಶ್ಚಂದ್ರ ಮಲ್ಲೂರು ಇವರಿಗೆ 52,895/-, ಚಂದ್ರಕಲಾ ಕೆ. ಎಕ್ಕೂರು ಇವರಿಗೆ ರೂ.50,515/- ಹೈದರ್ ಅಬ್ದುಲ್ ರೆಹೆಮಾನ್ ಇವರಿಗೆ ರೂ.32,835/-, ಗೌರಿ ವಿವೇಕ್ನಗರ ಇವರಿಗೆ ರೂ. 33,989/-, ಜಮೀಲಾ ಕೃಷ್ಣಾಪುರ ಇವರಿಗೆ 27,280/-, ಸಂಗೀತ ಮಂಗಳೂರು ಇವರಿಗೆ ರೂ. 24,100/-, ಸಾದನ್ಯ ಕುಂಜತ್ತ್ಬೈಲ್ ಇವರಿಗೆ 13,000/-, ಜಿಂದಪ್ಪ ಮಂಗಳೂರು ಇವರಿಗೆ ರೂ 10,000/-, ನೆಬಿಸಾ ಕಣ್ಣೂರು ಇವರಿಗೆ ರೂ.5827/-, ನಬೀಸಾ ಪರ್ವಿಸ್ ಕುದ್ರೋಳಿ ಇವರಿಗೆ ರೂ.5,000/- ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.