ನಾಳೆ ತುಳು ಭವನದಲ್ಲಿ ‘ಕಾರ್ನಿಕದ ಕಾನದ ಕಟದೆರ್’ ಯಕ್ಷಗಾನ ಪ್ರದರ್ಶನ

0
32

ಮಂಗಳೂರು : ತುಳುನಾಡಿನ ಅವಳಿ ವೀರರಾದ ಕಾನದ ಕಟದರ  ಸಾಹಸ ಕಥನವನ್ನು ಬಿಂಬಿಸುವ   ‘ಕಾರ್ನಿಕದ  ಕಾನದ ಕಟದೆರ್ ‘ಯಕ್ಷಗಾನ  ಪ್ರದರ್ಶನ  ಸೆ.14 ರಂದು ಮಧ್ಯಾಹ್ನ 2:00 ಗಂಟೆಗೆ ಮಂಗಳೂರಿನ ಉರ್ವ ಸ್ಟೋರಿನ  ತುಳು ಭವನದ ಸಿರಿಚಾವಡಿಯಲ್ಲಿ  ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಸತ್ಯ ಸಾರಮನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರು ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸುವರು.  ಸಂಜೆ ಆರು ಗಂಟೆ ತನಕ ಯಕ್ಷಗಾನ ನಡೆಯಲಿದೆ .

ಪರಿಶಿಷ್ಟ  ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಬಂದ ಕಾನದ – ಕಟದರು ತುಳುನಾಡಿನಲ್ಲಿ ಅವಳಿ ವೀರರಾದ ಕೋಟಿ ಚೆನ್ನಯರು ತೋರಿದಂತಹ  ಸಾಹಸ ಹಾಗೂ ಕಾರ್ನಿಕದ ಮಹಿಮೆಗಳನ್ನು ತೋರಿಸಿ ಅಮರ ವೀರರು ಎಂದು ಜನಾನುರಾಗಿಗಳಾದವರು ಎಂಬ ಪ್ರತೀತಿ ಇದೆ. ಕಾನದ ಕಟದರ ಹುಟ್ಟು, ಪ್ರಸರಣದ  ಚಿತ್ರಣವನ್ನು ಈ ಯಕ್ಷಗಾನ ಪ್ರಸಂಗವು  ಪ್ರಸ್ತುತಪಡಿಸಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.      

LEAVE A REPLY

Please enter your comment!
Please enter your name here