ಬ್ರಹ್ಮಾವರ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಬ್ರಹ್ಮಾವರ ಇದರ ವತಿಯಿಂದ ಅಯುಧ ಪೂಜೆಯ ದಿನದಂದು ಬ್ರಹ್ಮಾವರದ ವಿದ್ಯುಚ್ಯಕ್ತಿ ಮಂಡಲಿಯಲ್ಲಿ ಕಳೆದ 22 ವರ್ಷಗಳಿಂದ ವಿಶೇಷವಾದ ಪರಿಶ್ರಮದ ಸೇವೆ ಸಲ್ಲಿಸಿದ ಶ್ರೀಯುತ ಪದ್ಮನಾಭ ದೇವಾಡಿಗ ಇವರನ್ನು ಮಂಡಳಿಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೆಶಕರಾದ ಪ್ರವೀಣ ಆಚಾರ್ಯ, ಶಾಖಾಧಿಕಾರಿ ಸುದರ್ಶನ್, ಸಹಾಯಕ ಲೆಕ್ಕಪರಿಶೋದಕಿ ಹೇಮಲತಾ, ಉಪ ಶಾಖಾಧಿಕಾರಿ ಸಂತೋಷ ದೇವಾಡಿಗ, ಸಹಾಯಕ ಇಂಜಿನಿಯರ್ ನಯನ, ಹಾಗೂ ಗಣೇಶ ದೇವಾಡಿಗ, ವಸಂತ, ಅನಿಲ್ ಕುಮಾರ, ಶಾರದ, ಗಣೇಶ್ ಬಾರಕೂರು, ಸಂತೋಷ ಅಗ್ರಹಾರ, ಶಕುಂತಲಾ, ರಮೇಶ ನಾಯ್ಕ್, ಸಿಬ್ಬಂದಿ ವರ್ಗ ಹಾಗೂ ಮುಂತಾದವರು ಉಪಸ್ಥತರಿದ್ದರು.