ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ಉಡುಪಿ ಶ್ರೀ ಶಾರದಾ ದೇವಿಯ ಶೋಭಾ ಯಾತ್ರೆ

0
27


ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ   ತೆಂಕಪೇಟೆ ಉಡುಪಿ   ಶ್ರೀ ಶಾರದಾ ಮೊಹೋತ್ಸವದ ಸಮಿತಿಯ ಆಶ್ರಯದಲ್ಲಿ  23 ನೇ  ವರ್ಷದ ಶ್ರೀ  ಶಾರದಾ ಮಾತೆಯ  ವಿಸರ್ಜನಾ  ಶೋಭಾ ಯಾತ್ರೆ ಅದ್ದೊರಿಯಾಗಿ ನಡೆಯಿತು.                                                                                                                       

  ಶ್ರೀ ಲಕ್ಷ್ಮೀ ವೆಂಕಟೇಶ ದೇವರ   ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು , ಅರ್ಚಕರಾದ ದಯಾಘನ್ ಭಟ್ ಆರತಿ ಬೆಳಗಿಸಿ ಶ್ರೀ ಮಾತೆಯ ಭವ್ಯ ಶೋಭಾ ಯಾತ್ರೆ   ಗೆ ಚಾಲನೆ ನೀಡಿದರು ದೇವಳದಿಂದ ಹೊರಟು   ಐಡಿಯಲ್ ಸರ್ಕಲ್  , ಹಳೇ ಡಯಾನ ಸರ್ಕಲ್  , ತ್ರಿವೇಣಿ ಸರ್ಕಲ್  , ಚಿತ್ತರಂಜನ್ ವೃತ್ತ ,  ಕೊಳದಪೇಟೆಯಾಗಿ ದೇವಳಕ್ಕೆ ಬಂದು ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನೆಡೆಸಿ ವಿಸರ್ಜನೆ ಮಾಡಲಾಯಿತು.                                                                                                                                                                                                                                                                        ಮೆರವಣಿಗೆಯಲ್ಲಿ ವಿವಿಧ ಬಗೆಯ ಟ್ಯಾಬ್ಲೋ ಗಳು , ಚಂಡೆ  , ನಾಸಿಕ್ ಬ್ಯಾಂಡ್ , ಮಂಗಲವಾದ್ಯ ದೊಂದಿಗೆ    ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು  , ಮೆರವಣಿಗೆಯಲ್ಲಿ ವಿಶೇಷ ವಾಗಿ   ಬೆಳ್ಳಿ ರಥದಲ್ಲಿ ಶ್ರೀ ಕೃಷ್ಣ ಅರ್ಜುನ್ , ಕೃತಕ  ಆನೆ  ,  ವಿಠೋಬಾ ರುಖುಮಾಯಿ , ಶ್ರೀ ಪುರಂದರದಾಸ , ಶ್ರೀ ಕನಕದಾಸ  ವೇಷ ಧರಿಸಿ  ಮೆರಗಿ ಹೆಚ್ಚಿಸಿದರು , ಸಾವಿರಾರು ಪುರುಷರು  ,  ಮಹಿಳಾಯರು ,  ಯುವಕ  , ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು    , ವಿಶೇಷ ಆಕರ್ಷಣೆಯ ಉತ್ಸವದಲ್ಲಿ ಪಾಲ್ಗೊಂಡ  ಪುರಾಣ ಪ್ರಸಿದ್ಧ ಹತ್ತಾರು  ಟ್ಯಾಬ್ಲೋ ಗಳು ಭಕ್ತರ ಮನಸೆಳೆಯಿತು ,    ಊರಿನ ಮುಖ್ಯ ರಸ್ತೆಗಳಲ್ಲಿ ತಾಳಿರೋ ತೋರಣ ವಿದ್ಯುತ್ ದೀಪಾಲಂಕಾರ , ಸುಡು ಮದ್ದು ಪ್ರದರ್ಶನ ನಡೆಯಿತು. 

 ಸಮಾರಂಭದಲ್ಲಿ, ಆಡಳಿತ ಮೊಕ್ತೇಸರ ಪಿ ವಿ  ಶೆಣೈ  ,ಮಟ್ಟಾರ್  ವಸಂತ ಕಿಣೆ  , ಅಲೆವೂರು ಗಣೇಶ್ ಕಿಣಿ  ,   ಉಮೇಶ್ ಪೈ  ,   ವಿಶ್ವನಾಥ್ ಭಟ್ , ಶಾಂತರಾಮ ಪೈ , ಕೈಲಾಸ್ ನಾಥ ಶೆಣೈ, ಶಾಸಕ ಯಶ್ಪಾಲ್ ಸುವರ್ಣ,   ಮಾಜಿ ಶಾಸಕ ರಘುಪತಿ ಭಟ್ , ಸುಬ್ರಮಣ್ಯ ಪೈ ,ಮಟ್ಟಾರ್ ಸತೀಶ್ ಕಿಣಿ ,   ನರಹರಿ ಪೈ , ನಾಗೇಶ್ ಪ್ರಭು ,  ಭಾಸ್ಕರ್ ಶೆಣೈ  , ಅರುಣ್ ಕುಡ್ವ   ಹಾಗೂ ದೇವಳದ    ಆಡಳಿತ ಮಂಡಳಿಯ ಸದಸ್ಯರು  , ಜಿ ಎಸ್  ಬಿ  ಯುವಕ ಮಂಡಳಿ , ಭಗಿನಿ ವೃಂದ, ಜಿ ಎಸ್ ಬಿ ಮಹಿಳಾ ಮಂಡಳಿ  , ಶ್ರೀ ಶಾರದಾ  ಮಹೋತ್ಸವ ಸಮಿತಿಯ ಪದಾಧಿಕಾರಿಗಳು , ನೂರಾರು ಭಕ್ತಾಧಿಗಳು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here