ಕಾಸರಗೋಡು ಕೋಟೆ -ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೆಮೋತ್ಸವ “ದಿನಾಂಕ 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಯಲ್ಲಿ, ಕೋಟೆ ನಾಯಕರ ಮನೆ ಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದಿನಾಂಕ 20. ದೀಪಾವಳಿ ದಿನದಂದು ನಡೆಯಲಿರುವ ದೈವ ಕೋಲದ “ವೀಳ್ಯ ಕೊಡುವಿಕೆ “ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ನಡೆಯಲ್ಲಿ ಇಂದು 13.10.2025 ರಂದು ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ ದೈವಕ್ಕೆ ಅಧ್ಯಕ್ಷ ನವೀನ್ ನಾಯ್ಕ್ ವೀಳ್ಯ ನೀಡಿದರು. ಪ್ರದಾನ ಕಾರ್ಯದರ್ಶಿ ಮೋಹನ್ ದಾಸ್, ಕೋಶಾಧಿಕಾರಿ ವಾಮನ್ ರಾವ್ ಬೇಕಲ್, ಪ್ರದೀಪ್ ನಾಯ್ಕ್, ಶ್ರೀಕಾಂತ್ ನಾಯಕ್,, ಹರೀಶ್ ಕೂಡ್ಲು, ಕೌಶಿಕ್ ನಾಯ್ಕ್ ಮುಂತಾದವರು ನೇತೃತ್ವ ನೀಡಿದರು.