ದೀಪಾವಳಿ ಸಂಭ್ರಮದಲ್ಲಿ ಕಾರ್ಕಳ ಬಂಡಿಮಠ ಗೋಶಾಲೆಯಲ್ಲಿ ಗೋಪೂಜೆ – ಉದಯ ಶೆಟ್ಟಿ ದಂಪತಿ ಭಾಗಿ

0
59

ದೀಪಾವಳಿ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ಕಾರ್ಕಳದ ಬಂಡಿಮಠ ಅನಂತಕೃಷ್ಣ ಗೋಶಾಲೆಯಲ್ಲಿ ಕಾರ್ಕಳ ಕಾಂಗ್ರೆಸ್‌ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಮಿತಾ ಶೆಟ್ಟಿ ಗೋಪೂಜೆಯಲ್ಲಿ ಪಾಲ್ಗೊಂಡು ಮುಕ್ಕೋಟಿ ದೇವರು ನೆಲೆಸಿರುವ ಗೋಮಾತೆಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಗೋಶಾಲೆಯ ಪ್ರಮುಖರು ಅರ್ಚಕರು, ಮತ್ತು ಕಾರ್ಕಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಶುಭದ ರಾವ್, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ತಾರನಾಥ ಕೋಟ್ಯಾನ್‌, ಪುರಸಭಾ ಸದಸ್ಯರಾದ ವಿವೇಕಾನಂದ ಶೆಣೈ, ಶ್ರೀಮತಿ ಪ್ರತಿಮಾ ರಾಣೆ, ನಳಿನಿ ಆಚಾರ್ಯ ಮತ್ತು ಕೆಡಿಪಿ ಸದಸ್ಯರಾದ ರುಕ್ಷ್ಮಯ್ಯ ಶೆಟ್ಟಿಗಾ‌ರ್, ರಹೀಮ್ ಅಜೆಕಾರು, ಬ್ಲಾಕ್ ವಕ್ತಾರ ಪ್ರದೀಪ್‌ ಬೇಲಾಡಿ, ಸೊಸೈಟಿ ಅದ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್‌ ಅದ್ಯಕ್ಷೆ ರೀನಾ ಡಿಸೋಜ, ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ ಜೋಗಿ, ಕಡ್ತಲ ಗ್ರಾ.ಪಂ ಸದಸ್ಯ ದೀಕ್ಷಿತ್ ಶೆಟ್ಟಿ ದೊಂಡೆರಂಗಡಿ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here