ಬಡ ರೈತ ಕುಟುಂಬಕ್ಕೆ “ಗೋ-ದಾನ”

0
53

ಉಡುಪಿ: ಗೋ ಸಂತಿತಿ ಹೆಚ್ಚಾದರೆ ದೇಶವು ಸಮೃದ್ಧಿಯಾಗುತ್ತದೆ. ಆರೋಗ್ಯವೂ ವೃದ್ಧಿಯಾಗುತ್ತದೆ. ಹೀಗಾಗಿ ಗೋ ದಾನ ಶ್ರೇಷ್ಠವಾಗಿದ್ದು, ಪುಣ್ಯಪ್ರದ ಕಾರ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ 50 ನೇ ಜನ್ಮದಿನದ ಅಂಗವಾಗಿ ಕೃಷ್ಣಮಠದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಬಡ ರೈತ ಕುಟುಂಬಕ್ಕೆ “ಗೋ-ದಾನ” ನೆರವೇರಿಸಿ ಅವರು ಮಾತನಾಡಿದರು.
ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು (ಕಿರಿಯ ಪಟ್ಟ) ಆಶೀರ್ವಚನ ನೀಡಿದರು. ಶಾಸಕರಾದ ಯಶ್ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ , ಬಿಜೆಪಿ ಜಿಲ್ಲಾ ಅಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ, ಪ್ರಮುಖರಾದ ಶ್ರೀಕಾಂತ್​ ನಾಯಕ್​, ಸಂಧ್ಯಾ ರಮೇಶ್​, ವಿಜಯ ಕೊಡವೂರು, ಶಶಾಂಕ್​ ಶಿವತ್ತಾಯ, ಅಭಿರಾಜ್​ ಸುವರ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here