ವಿಶ್ವ ಕೊಂಕಣಿ ಕೇಂದ್ರದಲ್ಲಿ, ಸಿ ಎ ಇಂಟರ 20 ದಿವಸಗಳ ಉಚಿತ ತರಬೇತಿ ಶಿಬಿರ ಸಮಾರೋಪ ಸಮಾರಂಭ

0
10

ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವ,  ಹಾಗೂ  ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ,   ವಿಶಿಷ್ಟ  ರೀತಿಯ ತರಬೇತಿ ವಿಶ್ವ ಕೊಂಕಣಿ ಕೇಂದ್ರದ  ಸಿ.ಎ. ಪವರ್ 25 ತರಬೇತಿ. ಈ ಸಿ ಎ ಇಂಟರ  20 ದಿವಸಗಳ ಉಚಿತ ತರಬೇತಿ ಶಿಬಿರದ  ಸಮಾರೋಪ  ಸಮಾರಂಭ  ದಿ.25-11-2025 ರಂದು  ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ಈ ವರೆಗೆ ಸಿ.ಎ. ಇಂಟರ 6 ಸೀಸನ್ ಗಳು ಯಶಸ್ವಿಯಾಗಿದ್ದು ಉತ್ತಮ ಫಲಿತಾಂಶವನ್ನು ನೀಡಿದೆ. ಹೀಗೆಯೇ ವಿದ್ಯಾರ್ಥಿಗಳು ತಮ್ಮ ಛಲ ಸಾಧನೆಯಿಂದ ಗುರಿ ಮುಟ್ಟಲು, ಆತ್ಮವಿಶ್ವಾಸ ಹಾಗೂ ಅವಿರತ ಅಭ್ಯಾಸದಿಂದ ಮಾತ್ರ ಸಾಧ್ಯ, ಎಲ್ಲರೂ  ಸಿ ಎ ಇಂಟರ್ ಪರೀಕ್ಷೆ ತೇರ್ಗಡೆಯಾಗಿ ಸಿ ಎ  ಅಂತಿಮ ಪರೀಕ್ಷಾ ಹಂತಕ್ಕೆ ಬರುವಂತಾಗಲಿ ಎಂದು  ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮುಖ್ಯಸ್ಥರಾದ ಸಿ ಎ ಗೋಪಾಲಕೃಷ್ಣ ಭಟ್ ಅವರು  ಸಿ.ಎ. ಇಂಟರ್ ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಮನೋಸಾಮರ್ಥ್ಯಗಳ ಬಗ್ಗೆ ವಿವರಣೆ ನೀಡಿದರು.   

ಈ ತರಬೇತಿಗೆ ಹೊರರಾಜ್ಯಗಳಿಂದ ಆಹ್ವಾನಿಸಲ್ಪಟ್ಟವರೂ ಸೇರಿ ಹಲವು ಅನುಭವೀ ಉಪನ್ಯಾಸಕರನ್ನು ಆಹ್ವಾನಿಸಲಾಗಿದ್ದು, ಉಪನ್ಯಾಸಕರಾದ ನಾಸಿಕ್ ನ  ಸಿ ಎ. ದರ್ಶನ್ ಚಂದಾಲಿಯಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂತಹ ಒಂದು ಉಪಯುಕ್ತವಾದಂತಹ ಹಾಗೂ ಸುಸಜ್ಜಿತವಾದ ಸೌಕರ್ಯಗಳೊಂದಿಗೆ ವ್ಯವಸ್ಥಿತ ಮಾರ್ಗದರ್ಶನ ನೀಡುವ ಶಿಬಿರವನ್ನು  ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸುತ್ತಾ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದು ತೇರ್ಗಡೆಯಾಗಬೇಕು  ಎಂದು ಶುಭ ಹಾರೈಸಿದರು.

ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ್ ಪೈ, ದೂರದ ಶಿಬಿರಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸುವ ಉದ್ದೇಶ  ಹೊಂದಿದೆ.  ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ  ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.   

ದ.ಕ, ಉಡುಪಿ, ದಾಂಡೇಲಿ ಹಾಗೂ ಕೊಚ್ಚಿ ದೂರ ದೂರದ ಸ್ಥಳಗಳಿಂದ ಬಂದಿರುವ ಶಿಬಿರಾರ್ಥಿಗಳು ಉತ್ಸಾಹದಿಂದ ಹಾಗೂ ಆತ್ಮವಿಶ್ವಾಸದಿಂದ ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು, ಹಂಚಿಕೊಂಡರು. ಶಿಬಿರಾರ್ಥಿ ರೋನಿತ್ ಅತಿಥಿಗಳನ್ನು ಸ್ವಾಗತಿಸಿದರು, ಶ್ರೀನಿಧಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀದೇವಿ ಶೆಣೈ ಪ್ರಾರ್ಥಿಸಿದರು. ಲಾವಣ್ಯಾ ಶೆಣೈ ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here