ಪರ್ತಗಾಳಿ : ಈ ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸಹಜ ಮತ್ತು ಸುಲಭ ಸಾಧನವೆಂದರೆ ಅದು ಶ್ರೀರಾಮ ನಾಮ ಸ್ಮರಣೆ. ಇದು ನೇರವಾಗಿ ವೇದ ಮಂತ್ರಕ್ಕೆ ಸಮಾನವಾಗಿದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಕರೆ ನೀಡಿದರು. ಇಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜೀವೋತ್ತಮ ಸಭಾ ಮಂಟಪದಲ್ಲಿ ನಡೆದ ಸಾರ್ಧ ಪಂಚಶತಮಾನೋತ್ಸವದ ಧರ್ಮ ಸಭೆಯಲ್ಲಿ ಆಶೀರ್ವಚನ

