ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 8 ಜನ ಅರ್ಜಿದಾರರಿಗೆ ರೂ.4,41,118/- (ರೂಪಾಯಿ ನಾಲ್ಕು ಲಕ್ಷದ ನಲವತ್ತೋಂದು ಸಾವಿರದ ನೂರ ಹದಿನೆಂಟು) ಪರಿಹಾರ ಧನ ಅರ್ಜಿದಾರರ ಖಾತೆಗೆ ಬಿಡುಗಡೆ.
ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ, ಯಶವರ್ಧನ್ ಎಂ. ಮಣ್ಣಗುಡ್ಡ ಇವರಿಗೆ ರೂ.92,429/-, ಮನೋಹರ್ ಮಾಬೆನ್ ಬೋಳಾರ ಇವರಿಗೆ ರೂ.91,690/-, ರವಿಶಂಕರ್ ಕಾಟಿಪಳ್ಳ ಇವರಿಗೆ ರೂ.76,157/-, ನಿಶ್ಚಲ್ ಶಕ್ತಿನಗರ ಇವರಿಗೆ ರೂ.70,000/-, ಮ್ಯಾಗ್ದಲಿನ್ ಮಾಡ್ತಾ ಪಳ್ನೀರ್ ಇವರಿಗೆ ರೂ.54,503/-, ಉಸ್ಮಾನ್ ಮೂಡಬಿದ್ರಿ ಇವರಿಗೆ 41,021/-, ಗುಡ್ಡೆ ಅಬ್ದುಲ್ ರೆಹೆಮಾನ್ ಅಡ್ಡೂರು ಇವರಿಗೆ 10,318/-, ಅಯಿಷಾ ರ್ವಿನ್ ಅಡ್ಯಾರ್ ಇವರಿಗೆ ರೂ.5,000/- ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

