ರಜತ ಮಹೋತ್ಸವ ಆಚರಣಾ ಸಮಿತಿ ರಚನೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ) ಸ್ಥಾಪನೆಗೊಂಡು 25 ವರ್ಷಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಆಚರಿಸುವ ಬಗ್ಗೆ ಡಿಸೆಂಬರ್ 27 ರಂದು ಪೂರ್ವಭಾವಿ ಸಭೆ ನಡೆಯಿತು.
ರಜತ ಮಹೋತ್ಸವ ಸಮಿತಿ ಗೌರವ ಮಾರ್ಗದರ್ಶಕರಾಗಿ ಹರೀಶ್ ಗೌಡ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಆರಿಕೋಡಿ, ಗೌರವಾಧ್ಯಕ್ಷರಾಗಿ ಮೋಹನ್ ಕುಮಾರ್ ಶ್ರೀ ಲಕ್ಷ್ಮಿ ಗ್ರೂಪ್ ಉಜಿರೆ, ಅಧ್ಯಕ್ಷರಾಗಿ ಜಯಣ್ಣಗೌಡ ಮಿನಂದೇಲು. ಪ್ರಧಾನ ಸಂಚಾಲಕರಾಗಿ ವಿದ್ಯಾ ಶ್ರೀನಿವಾಸ ಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್, ಬೆಳಾಲು ಪ್ರಧಾನ ಕಾರ್ಯದರ್ಶಿಗಳಾಗಿ , ವಿಜಯ ಮುಖ್ಯೋಪಾಧ್ಯಾಯರು, ಕಾರ್ಯದರ್ಶಿಗಳಾಗಿ ಸತೀಶ್ ಗೌಡ ಎಳ್ಳುಗದ್ದೆ , ಸಂತೋಷ ಮಡಿವಾಳ ,ಸ್ವಾತಿ ಮರ್ವದಡಿ. ಉಪಾಧ್ಯಕ್ಷರುಗಳಾಗಿ ದಿನೇಶ್ ಗೌಡ ಧರ್ಮದೋಡಿ , ಜಗದೀಶ್ ಜೈನ್ ಈರಂತ್ಯಾರು, ದಿನೇಶ್ ಇರಿಂಬಿತ್ತಿಲು ,ಸೂರಪ್ಪ ಪೂಜಾರಿ ಅತ್ತಿದಡಿ ಸೂರಪ್ಪ ಗೌಡ ಭಂಡಾರಿ ಮಜಲು. ಕೋಶಾಧಿಕಾರಿಯಾಗಿ ಜಯಶ್ರೀ ಬಿಕೆ ಸಹ ಶಿಕ್ಷಕಿ, ಆಯ್ಕೆ ಮಾಡಲಾಯಿತು. ವಿವಿಧ ಸಮಿತಿ ರಚಿಸಿ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

