ಉಡುಪಿ: ಹಿಂದು ಸಂಗಮ ಆಯೋಜನಾ ಸಮಿತಿ ಉಡುಪಿ ನಗರ , ಶಿರಿ ಬೀಡು ಮತ್ತು ಬನ್ನಂಜೆ ವಾರ್ಡ ವ್ಯಾಪ್ತಿಯಲ್ಲಿ ಫೆ.1 ರಂದು ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರ ಶಿರಿಬೀಡುನಲ್ಲಿ ನೆಡೆಯಲಿರುವ ಹಿಂದು ಸಂಗಮ ಹಾಗೂ ಬ್ರಹತ್ ಶೋಭಾ ಯಾತ್ರೆ ಅಹ್ವಾನ ಪತ್ರಿಕೆಯ ಬಿಡುಗಡೆಯ ಸಮಾರಂಭ ಜ . 15 ರಂದು ಉಡುಪಿ ಸ್ವರಸ್ಪತಿ ಶಾಲಾ ವಠಾರದಲ್ಲಿ ಜರಗಿತು. ಸಮಾರಂಭದ ವೇದಿಕೆಯಲ್ಲಿ ಶಿರಿಬೀಡು ವಾರ್ಡಿನ ನಗರ ಸಭಾ ಸದಸ್ಯ ಟಿ ಜಿ ಹೆಗ್ಡೆ ಅಹ್ವಾನ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿ ನಮ್ಮ ಸಮಾಜದ ನಮ್ಮ ಮನೆಯ ಕಾರ್ಯಕ್ರಮ ವೆಂದು ಭಾವಸಿ ಸಮಸ್ತ ಹಿಂದೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ವಿನಂತಿಸಿಕೊಂಡರು , ಬನ್ನಂಜೆ ವಾರ್ಡಿನ ನಗರ ಸಭಾ ಸದಸ್ಯೆ ಸವಿತಾ ಹರೀಶ್ ರಾಮ್ , ಸಂಯೋಜಕರಾದ ಸಂದೀಪ್ ಶೆಟ್ಟಿಗಾರ್ , ಆನಂದ ಸುವರ್ಣ , ಸಮಿತಿಯ ಪದಾಧಿಕಾರಿಗಳು , ವಾರ್ಡಿನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

