ಮಾಣಿಲಬೀಡು : ದಿನಾಂಕ 21-02-2026 ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಮತ್ತು ರಂಗಪೂಜೆ ನಡೆಯಲಿದೆ.
ಕಾರ್ಯಕ್ರಮಗಳು
ದಿನಾಂಕ 21-02-2026ನೇ ಶನಿವಾರ , ಬೆಳಗ್ಗೆ ಗಂಟೆ 8-00ಗೆ ಗಣಪತಿ ಹವನ , ಬೆಳಗ್ಗೆ ಗಂಟೆ 9-00ಗೆ ನವಕ ಕಲಶ ಪೂಜೆ , ಬೆಳಗ್ಗೆ ಗಂಟೆ 9-30ಗೆ ಪವಮಾನಾಭಿಷೇಕ, ಬೆಳಗ್ಗೆ ಗಂಟೆ 10-00ಕ್ಕೆ ಭಜನಾ ಕಾರ್ಯಕ್ರಮ (ಮಹಮ್ಮಾಯಿ ಭಜನಾ ಸಂಘ ಸೊರಂಪಳ್ಳ ಇವರಿಂದ) ಮಧ್ಯಾಹ್ನ ಗಂಟೆ 12-00ಗೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ಗಂಟೆ 6-30ಗೆ ಭಜನೆ ಶ್ರೀ ವಿಷ್ಣುಮೂರ್ತಿ ಭಜನಾ ಸಂಘ ಮಾಣಿಲಬೀಡು ಇವರಿಂದ, ರಾತ್ರಿ ಗಂಟೆ 8-00ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು.
ರಾತ್ರಿ ಗಂಟೆ 9-00 ಗಂಟೆಗೆ ಶ್ರೀ ಸಾಯಿ ಶಕ್ತಿ ಕಲಾ ಬಳಗ ಉರ್ವ, ಚಿಲಿಂಬಿ, ಮಂಗಳೂರು ಇವರಿಂದ ‘ಜೋಡು ಜೀಟಿಗೆ’ ತುಳು ಅದ್ದೂರಿ ಸಿನಿ ನಾಟಕ ನಡೆಯಲಿದೆ.

