ಕಾಸರಗೋಡು : ಕೇರಳ ಸಂಗೀತ ಅಕಾಡೆಮಿಯ ಸ್ಕಾಲರ್ಷಿಪ್, ಇಂಡಿಯನ್ ಪೀಪಲ್ ಥೀಯೇಟರ್ ನ “ಗಾನ ಸುಧಾ “ಪ್ರಶಸ್ತಿ ವಿಜೇತೆ 1997ರಿಂದಲೇ ಕಾಸರಗೋಡಿನಲ್ಲಿ “ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ ಸ್ಥಾಪಿಸಿ ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಪ್ರತಿಭೆ ಬೆಳಗಿಸಲು ಸಂಗೀತ ಉಪಕರಣ ವಿಧಗ್ದ ತನ್ನ ಪತಿ ಈಶ್ವರ ಭಟ್ ಇವರ ಪ್ರೋಸ್ತಾಹದಿಂದ ಕಲಾ ತಪಸ್ಸು ಮಾಡುತ್ತಿರುವ ಹಾಗೂ ನೆರೆಯ ಹೊಸದುರ್ಗದಲ್ಲಿ ಸದ್ಗುರು ತ್ಯಾಗ ಬ್ರಹ್ಮ ಸಭಾ ” ಹುಟ್ಟು ಹಾಕುವಲ್ಲಿ ಪಾಲುಗೊಂಡು, ಕರ್ನಾಟಕ, ಕೇರಳ, ತಮಿಳುನಾಡಿನ ಸಭಾ ಗಳಲ್ಲಿ ತಮ್ಮ ಪ್ರತಿಭೆಯನ್ನು ಮಿಂಚಿಸಿ ಕಾಸರಗೋಡಿನ ಹೆಸರನ್ನು ದೇಶ ವ್ಯಾಪಿ ಮಾಡಿದ, ಮಾಡುತ್ತಿರುವ ಕಾಸರಗೋಡಿನ ವಿದ್ಯಾನಗರದ ನಿವಾಸಿಗಳಾದ ಉಷಾ ಈಶ್ವರ ಭಟ್ ದಂಪತಿಗಳಿಗೆ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008) ಇದರ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026ನೀಡಿ ಗೌರವಿಸಲು ತೀರ್ಮಾನಿಸಿದೆ.
ಈ ಪ್ರಶಸ್ತಿಯನ್ನು ಕನ್ನಡ ಭವನದ ಅಂಗ ಸಂಸ್ಥೆಯಾದ “ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕ ದಂಗವಾಗಿ ನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರ ಸರ್ವಾಧ್ಯಕ್ಷತೆಯಲ್ಲಿ ಹಾಗೂ ಶ್ರೀಮದ್ ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ಯವರ ಮಂತ್ರಾಕ್ಷತೆ ಯೊಂದಿಗೆ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

