ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಸುದರ್ಶನ ಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮವು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ರೋಟರಿ ಬಾಲ ಭವನದಲ್ಲಿ ನಡೆಯಿತು.
ವೆಲ್ನೆಸ್ ಪ್ರೋಗ್ರಾಂ ಶಿಕ್ಷಕಿ ಸುನೀತಾ ಉದಯಕುಮಾರ್ ಸುದರ್ಶನ ಕ್ರಿಯೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಚೆಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಿಟ್ಟೆ ಕಾಲೇಜು ವಿದ್ಯಾರ್ಥಿ ಕೌಸ್ತುಬ್ ಗೆ ಧನಸಹಾಯ ನೀಡಲಾಯಿತು. ಧನಸಹಾಯದ ಚೆಕ್ಕನ್ನು ಪಿ.ಡಿ. ಜಿ ಡಾಕ್ಟರ್ ಭರತೇಶ್ ಆದಿರಾಜರವರು ವಿದ್ಯಾರ್ಥಿಗೆ ನೀಡಿದರು.

