ಮೂಡುಬಿದಿರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಅವರು ಆಯ್ಕೆಯಾಗಿದ್ದಾರೆ.
ಘಟಕದ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಸಂಪತ್ ಪೂಜಾರಿ ನೆತ್ತೋಡಿ ಮತ್ತು ಜೀವಿತಾ ಶಂಕರ್,ಕಾರ್ಯದರ್ಶಿಯಾಗಿ ಅಶ್ವಿನ್ ಬಿರ್ವ,ಕೋಶಾಧಿಕಾರಿಯಾಗಿ ಜಯಶೀಲಾ, ಜೊತೆಕಾರ್ಯದರ್ಶಿಗಳಾಗಿ ಅಕ್ಷತಾ ಮಾರೂರು,ಮೇಘನಾ ಅವರು ಆಯ್ಕೆಯಾಗಿದ್ದಾರೆ.
ಆರೋಗ್ಯ ನಿರ್ದೇಶಕರಾಗಿ ಶುಭಕರ ಅಂಚನ್, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಶುಭ ಲಕ್ಷ್ಮಿ ತೋಡಾರ್,ಮಹಿಳಾ ಸಂಘಟನೆ ನಿರ್ದೇಶಕರಾಗಿ ಪಾವನಾ ಸಂತೋಷ್ ಮತ್ತು ಸುಮಿತ್ರಾ ವಿಶ್ವನಾಥ್,ಕ್ರೀಡಾ ನಿರ್ದೇಶಕರಾಗಿ ಹರೀಶ್ ಮಾರೂರು ,ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಪ್ರತಿಭಾ ಸುರೇಶ್ ಹಾಗೂ ಸಾಂಸ್ಕೃತಿಕ ನಿರ್ದೇಶಕರಾಗಿ ಕೀರ್ತನ್ ಶಾಂತಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಶ್ವೇತಾ,ರಕ್ಷಿತಾ,ತುಷಿತಾ, ವಿದ್ಯಾನಿಧಿ ನಿರ್ದೇಶಕರಾಗಿ ದಯಾನಂದ್ ಮಾಸ್ತಿಕಟ್ಟೆ,ಪ್ರಚಾರ ನಿರ್ದೇಶಕರಾಗಿ ಪ್ರಶಾಂತ್ ಕೋಟೆಬಾಗಿಲು,ಸಮಾಜಸೇವೆ ನಿರ್ದೇಶಕರಾಗಿ ಉಮೇಶ್ ಕೋಟ್ಯಾನ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ವಿದೇಶ್ ಎಂ, ಹಾಗೂ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾಗಿ ಯೋಗಿತಾ ನವಾನಂದ್ ಅವರು ಆಯ್ಕೆಯಾಗಿದ್ದಾರೆ.

