ಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಗಣೇಶ್ ಪ್ರಸಾದ್ ಬಸ್ ಮಾಲೀಕರಾದ ದಿಲ್ರಾಜ್ ಆಳ್ವ ಇವರ ನೂತನ NEUTON ಎಲೆಕ್ಟ್ರಿಕ್ ಸಿಟಿ ಬಸ್ ಫೆ. 26 ರಂದು ಲೋಕಾರ್ಪಣೆಗೊಂಡಿತು. ಈ NEUTON ಎಲೆಕ್ಟ್ರಿಕ್ ಸಿಟಿ ಬಸ್ ರೂಟ್ ನಂ. 27 ಸ್ಟೇಟ್ ಬ್ಯಾಂಕ್ ಟು ಮಂಗಳಾದೇವಿವರೆಗೆ ಸಂಚಾರ ನಡೆಸಲಿದೆ.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಪದ್ಮರಾಜ್ ಆರ್ ಪೂಜಾರಿ, ಬಸ್ ಓನರ್ ಅಸೋಸಿಯೇಶನ್ನ ಪದಾಧಿಕಾರಿಗಳು ಹಾಗೂ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

