ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ವಗ್ಗ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಾಮಾಜಿಕ ಸೇವೆಯನ್ನು ಗುರುತಿಸಿ ಐಸಿರಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ವಗ್ಗದ ಮಾಲಕರಾದ ನಾಗೇಶ್ ಪೂಜಾರಿ ಮದ್ವ ರವರು ಶೌರ್ಯ ತಂಡವನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಿದರು.ಹಾಗೂ ತಂಡಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಮುಕ್ತೇಶ್ವರರಾದ ಜಿನರಾಜ್ ಆರಿಗ, ಐಸಿರಿ ಎಲೆಕ್ಟ್ರಾನಿಕ್ಸ್ ಮಾಲಕ ನಾಗೇಶ್ ರವರ ತಾಯಿ ವಸಂತಿ, ಪತ್ನಿ ಸೇವಂತಿ, ಶಿವಾಜಿ ಬಳಗದ ಗೌರವಾಧ್ಯಕ್ಷರಾದ ಪ್ರಕಾಶ್ ಎಂ, ಕಾಡಬೆಟ್ಟು ಶೌರ್ಯ ತಂಡದ ಘಟಕ ಪ್ರತಿನಿಧಿಯಾದ ಪ್ರವೀಣ್, ತಂಡದ ಸಂಯೋಜಕಿ ರೇಖಾ ಪಿ, ಮತ್ತು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.