ಬೆಳ್ತಂಗಡಿ: ಶ್ರಿ ವರಮಹಾಲಕ್ಮಿ ಪೂಜಾ ಸಮಿತಿ ಅಳದಂಗಡಿ ಇದರ ಆಶ್ರಯದಲ್ಲಿ , ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಬಡಗಕಾರಂದೂರು, ಸಾದನಾ ಜ್ನಾನವಿಕಾಸ ಕೇಂದ್ರ, ಜನಜಾಗೃತಿ ಗ್ರಾಮ ಸಮಿತಿ ಬಡಗಕಾರಂದೂರು, ಶ್ರಿ ಸೋಮನಾಥೇಶ್ವರಿ ಭಜನಾ ಮಂಡಳಿ (ರಿ) ಬಡಗಕಾರಂದೂರು ಇವುಗಳ ಆಶ್ರಯದಲ್ಲಿ ಆ.8 ರಂದು ಶ್ರಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯುವ 22 ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರಿ ಕ್ಷೇತ್ರ ದರ್ಮಸ್ಥಳದ ಧರ್ಮಾದಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ. ರೇಖಾ ರಾಜಶೇಖರ ಶೆಟ್ಟಿ. ಎ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ, ಜನ ಜಾಗೃತಿ ಅಧ್ಯಕ್ಷ ಯಶೋಧರ ಸುವರ್ಣ, ಒಕ್ಕೂಟದ ನಿಕಟ ಪೂರ್ವ ಕಾರ್ಯದರ್ಶಿ ಪ್ರಸಾದ್ ಕುಲಾಲ್, ಮೇಲ್ವಿಚಾರಕರು ಯಶೋಧ ಎಂ. ಎ.ಬಿ ಸೇವಾ ಪ್ರತಿನಿಧಿಯಾದ ಶುಭ ಹರೀಶ್ ರೈ, ಪೂರ್ಣಿಮಾ ಪ್ರಮೋದ್, ಪೂಜಾ ಪದಾಧಿಕಾರಿ ಸುಮಿತ್ರ ಉಪಸ್ಥಿತರಿದ್ದರು.