ಮೂಡುಬಿದಿರೆ : ತಾಲೂಕಿನ ಕಲ್ಲಬೆಟ್ಟು, ಕರಿಂಜೆ, ಮಾರೂರು ಗಣೇಶ ಸೇವಾ ಟ್ರಸ್ಟ್ ನ ವತಿಯಿಂದ 24ನೇ ವರ್ಷದ ಗಣೇಶೋತ್ಸವ ಆಗಸ್ಟ್ 27 ರಂದು ನಡೆಯಲಿದೆ.
ಕಲಬೆಟ್ಟು ಗ್ರಾಮದ ಗಣೇಶ ಸೇವಾಧಾಮದಲ್ಲಿ ನಡೆಯುವ ಈ ಉತ್ಸವದಲ್ಲಿ ಗಣ ಹೋಮ, ಭಜನೆ, ಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ನ ಅಧ್ಯಕ್ಷ ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಗಣೇಶ ಸೇವಾಧಾಮದ ಉದ್ಘಾಟನೆಯು ನಡೆಯಲಿದೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಎ

