ಹುಬ್ಬಳ್ಳಿ-ಧಾರವಾಡ ವಲಯದ ಬ್ಯಾಂಕ್ ಆಫ್ ಇಂಡಿಯಾ, ಮರಾಠಾ ಮಂಡಲ ಶಾಖೆಯು ರೋಗಿಗಳ ಸಾರಿಗೆ ಮತ್ತು ತುರ್ತು ಪ್ರತಿಕ್ರಿಯೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಾಯ ಮಾಡುವ ಸಲುವಾಗಿ ಮರಾಠಾ ಮಂಡಲದ ನಾಥಾಜಿರಾವ್ ಜಿ. ಹಾಲ್ಗೇಕರ್ ದಂತ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿಗೆ ಒಂದು ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದೆ
ಬೆಳಗಾವಿ, ಫೆಬ್ರವರಿ 9, 2026 : ಬ್ಯಾಂಕ್ ಆಫ್ ಇಂಡಿಯಾ, ಸಮುದಾಯ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸಲು ಹಾಗೂ ಪ್ರತಿಬಿಂಬಿಸಲು ಮತ್ತು ತುರ್ತುಸ್ಥಿತಿಯ ರೋಗಿಗಳಿಗೆ ಪ್ರತಿಕ್ರಿಯೆಯನ್ನು ಬಲಪಡಿಸುವ ಸಲುವಾಗಿ ಬೆಳಗಾವಿಯ ಮರಾಠಾ ಮಂಡಲ ಶಾಖೆಯ ಮೂಲಕ, ಮರಾಠಾ ಮಂಡಲದ ನಾಥಾಜಿರಾವ್ ಜಿ. ಹಲ್ಗೇಕರ್ ದಂತ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ (ಎಮ್ಎಮ್ಎನ್ಜಿಎಚ್ಐಡಿಎಸ್ ಮತ್ತು ಆರ್ಸಿ) ಒಂದು ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದೆ. ಇದು “ಬ್ಯಾಂಕಿಂಗ್ ಮೀರಿದ ಸಂಬಂಧ”ವನ್ನು ಸೂಚಿಸುತ್ತದೆ. ಎಂಎಂಎನ್ಜಿಎಚ್ಐಡಿಎಸ್ ಮತ್ತು ಆರ್ಸಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸದರಿ ಆಂಬುಲೆನ್ಸ್ ಅನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು.
ಬ್ಯಾಂಕ್ ಆಫ್ ಇಂಡಿಯಾ, ಹುಬ್ಬಳ್ಳಿ-ಧಾರವಾಡ ವಲಯದ ವಲಯ ವ್ಯವಸ್ಥಾಪಕರಾದ ತಾರಿಣಿ ಚರಣ್ ಸಾಹು ಮತ್ತು ಹುಬ್ಬಳ್ಳಿ-ಧಾರವಾಡ ವಲಯದ ಉಪ ವಲಯ ವ್ಯವಸ್ಥಾಪಕರಾದ ಶ್ರೀ ಅಭಿನವ ಪಾಂಡೆ ಅವರು ಆಂಬ್ಯುಲೆನ್ಸ್ನ ಕೀಯನ್ನು ಮರಾಠಾ ಮಂಡಲದ ಅಧ್ಯಕ್ಷ ಡಾ. ರಾಜಶ್ರೀ ನಾಗರಾಜು ಹಾಗೂ ಡಾ. ರಾಮನಾಥ ನಾಯಕ್, ಪ್ರಾಂಶುಪಾಲರು, ಎಮ್ಎಮ್ಎನ್ಜಿಎಚ್ಐಡಿಎಸ್ ಮತ್ತು ಆರ್ಸಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮರಾಠಾ ಮಂಡಲದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬ್ಯಾಂಕ್ ಆಫ್ ಇಂಡಿಯಾ, ಮರಾಠಾ ಮಂಡಲ್ ಶಾಖೆಯ ಹಲವಾರು ಗೌರವಾನ್ವಿತ ಗ್ರಾಹಕರು ಹಾಜರಿದ್ದರು.

ಹುಬ್ಬಳ್ಳಿ-ಧಾರವಾಡ ವಲಯದ ವಲಯ ವ್ಯವಸ್ಥಾಪಕಕರಾದ ತಾರಿಣಿ ಚರಣ್ ಸಾಹು ಮಾತನಾಡಿ, “ಬ್ಯಾಂಕ್ ಆಫ್ ಇಂಡಿಯಾದಲ್ಲಿ, ಬ್ಯಾಂಕಿಂಗ್ ಸೇವೆಯು ಆರ್ಥಿಕ ಸೇವೆಗಳನ್ನು ಮೀರಿದೆ ಮತ್ತು ನಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಮತ್ತು ಸಮುದಾಯಗಳೊಂದಿಗೆ ನಿರಂತರ ಸಂಬಂಧವನ್ನು ಬೆಳೆಸುತ್ತದೆ ಎಂದು ನಾವು ನಂಬುತ್ತೇವೆ. ಈ ದೇಣಿಗೆಯಂತಹ ಉಪಕ್ರಮಗಳು ನಮ್ಮ ‘ಬ್ಯಾಂಕಿಂಗ್ನ ಹೊರಗಿನ ಸಂಬಂಧ’ ತತ್ವದ ಒಂದು ಪ್ರಾಯೋಗಿಕ ಅಭಿವ್ಯಕ್ತಿಯಾಗಿದೆ, ಇದು ಅಗತ್ಯ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಸಂದರ್ಭದಲ್ಲಿ ಅರ್ಥಪೂರ್ಣ ಹಾಗೂ ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.”
ಹುಬ್ಬಳ್ಳಿ-ಧಾರವಾಡ ವಲಯದ ಉಪ ವಲಯ ವ್ಯವಸ್ಥಾಪಕರಾದ ಅಭಿನವ ಪಾಂಡೆ ಮಾತನಾಡಿ, “ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯದ ಯೋಗಕ್ಷೇಮದ ಮೇಲೆ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ನಿರಂತರ ಗಮನವನ್ನು ಈ ಉಪಕ್ರಮವು ಒತ್ತಿಹೇಳುತ್ತದೆ. ನಮ್ಮ ಬ್ಯಾಂಕ್, ಮರಾಠಾ ಮಂಡಲದೊಂದಿಗೆ ನಂಬಿಕೆ ಮತ್ತು ಮೌಲ್ಯಗಳನ್ನು ಹಂಚಿಕೊಂಡಿದೆ ಹಾಗೂ ನಾವು ಎಮ್ಎಮ್ಎನ್ಜಿಎಚ್ಐಡಿಎಸ್ ಮತ್ತು ಆರ್ಸಿ ಅನ್ನು ಬೆಂಬಲಿಸಲು ಸಂತೋಷಪಡುತ್ತೇವೆ.
ಆಂಬ್ಯುಲೆನ್ಸ್ನ ಕೊಡುಗೆಯು ಎಮ್ಎಮ್ಎನ್ಜಿಎಚ್ಐಡಿಎಸ್ ಮತ್ತು ಆರ್ಸಿ ನಲ್ಲಿ ತುರ್ತು ವೈದ್ಯಕೀಯ ಪ್ರತಿಕ್ರಿಯೆ ಮತ್ತು ರೋಗಿಗಳ ಸಾರಿಗೆ ಸೌಲಭ್ಯಗಳನ್ನು ಗಮನಾರ್ಹವಾಗಿ ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದರಿಂದಾಗಿ ರೋಗಿಗಳು ಮತ್ತು ಸುತ್ತಮುತ್ತಲಿನ ಸಮುದಾಯಕ್ಕೆ ಸಕಾಲಿಕ ಆರೋಗ್ಯ ಸೇವೆಗಳಿಗೆ ಸುಧಾರಿತ ಪ್ರವೇಶವನ್ನು ಬೆಂಬಲಿಸುತ್ತದೆ.
ಮರಾಠಾ ಮಂಡಲದ ಅಧ್ಯಕ್ಷೆ ಡಾ.ರಾಜಶ್ರೀ ನಾಗರಾಜು ಮಾತನಾಡಿ, “ಸಂಸ್ಥೆಗೆ ಉದಾರವಾದ ಬೆಂಬಲ ನೀಡಿದ್ದಕ್ಕಾಗಿ ಮರಾಠಾ ಮಂಡಲ ಸಮೂಹ ಸಂಸ್ಥೆಗಳು ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೃತಜ್ಞತೆ ಸಲ್ಲಿಸುತ್ತವೆ. ಬ್ಯಾಂಕ್ ಹಲವು ವರ್ಷಗಳಿಂದ ಮೌಲ್ಯಯುತ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ಪಾಲುದಾರವಾಗಿದೆ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ಆಂಬ್ಯುಲೆನ್ಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಹಾಗೂ ಸಮಾಜದ ಕಲ್ಯಾಣಕ್ಕೆ ಬ್ಯಾಂಕ್ನ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.”
ಈ ಸಂದರ್ಭದಲ್ಲಿ ಮಾತನಾಡಿದ ಎಂಎಂಎನ್ಜಿಎಚ್ಐಡಿಎಸ್ ಮತ್ತು ಆರ್ಸಿಯ ಪ್ರಾಂಶುಪಾಲ ಡಾ. ರಮಾಕಾಂತ್ ನಾಯಕ್ ತಿಳಿಸಿದರು, “ಈ ಆಂಬ್ಯುಲೆನ್ಸ್ ಸೇರ್ಪಡೆಯು ಸಕಾಲಿಕ ವೈದ್ಯಕೀಯ ನೆರವು ಮತ್ತು ರೋಗಿಗಳ ಸಾರಿಗೆಯನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ತನ್ನ ನಿರಂತರ ಬೆಂಬಲಕ್ಕಾಗಿ ಮತ್ತು ಶೈಕ್ಷಣಿಕ ವೈದ್ಯಕೀಯ ಸಂಸ್ಥೆಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವವನ್ನು ಗುರುತಿಸಿದ್ದಕ್ಕಾಗಿ ನಾವು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇವೆ.”
ಈ ಉಪಕ್ರಮವು ಬ್ಯಾಂಕ್ ಆಫ್ ಇಂಡಿಯಾ ಮತ್ತು ಮರಾಠಾ ಮಂಡಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಗಳ ನಡುವಿನ ದೀರ್ಘಕಾಲದ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ಸಂಬಂಧವನ್ನು ಪ್ರತಿಬಿಂಬಿಸುತ್ತದೆ, ಇದು ಹಲವಾರು ವರ್ಷಗಳಿಂದ ಬ್ಯಾಂಕ್ನ ಮರಾಠಾ ಮಂಡಲ್ ಶಾಖೆಯೊಂದಿಗೆ ಸಂಬಂಧ ಹೊಂದಿದೆ. ಕಾಲಾನಂತರದಲ್ಲಿ, ಈ ಸಂಬಂಧವು ನಂಬಿಕೆ, ನಿರಂತರತೆ ಮತ್ತು ಸಮುದಾಯದ ಅಭಿವೃದ್ಧಿಗೆ ಹಂಚಿಕೆಯ ಬದ್ಧತೆಯಲ್ಲಿ ಆಧಾರವಾಗಿರುವ ಬಲವಾದ ಸಾಂಸ್ಥಿಕ ಪಾಲುದಾರಿಕೆಯಾಗಿ ವಿಕಸನಗೊಂಡಿತು-ನಿಜವಾಗಿಯೂ ಬ್ಯಾಂಕ್ ಆಫ್ ಇಂಡಿಯಾದ “ಬ್ಯಾಂಕಿಂಗ್ನ ಹೊರಗಿನ ಸಂಬಂಧ” ಎಂಬ ನೀತಿಯನ್ನು ಸಾಕಾರಗೊಳಿಸಿದೆ.
ಕಾರ್ಯಕ್ರಮವು ಬೆಳಗಾವಿ ಪ್ರದೇಶದೊಂದಿಗಿನ ಬ್ಯಾಂಕ್ ಆಫ್ ಇಂಡಿಯಾದ ನಿರಂತರ ಭರವಸೆ ಮತ್ತು ರಚನಾತ್ಮಕ ಸಿಎಸ್ಆರ್ ಉಪಕ್ರಮಗಳ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಅದರ ಪೂರ್ವಭಾವಿ ಪಾತ್ರವನ್ನು ಪ್ರಶಂಸಿಸುವುದರ ಮೂಲಕ ಮುಕ್ತಾಯಗೊಂಡಿತು.

