ಬೆಳ್ತಂಗಡಿ :ನಾಳೆ (ಫೆ.21)ಟೀಮ್ ನವಭಾರತ್ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಸಾಂಸ್ಕೃತಿಕ ಉತ್ಸವ. ಸಂಜೆ 6.00 ರಿಂದ, ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಹಲವಾರು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ನೆರವೇರಲಿದೆ.ಟೀಮ್ ನವಭಾರತ್, ಕಳೆದ ಒಂದೆರಡು ವರ್ಷಗಳ ಹಿಂದೆ ರಾಷ್ಟ್ರೀಯ ಚಿಂತನೆಯನ್ನು ಒಳಗೊಂಡ ಸಮಾನ ಮನಸ್ಕ ಯುವಕರು ಪ್ರಾರಂಭಿಸಿದ ಸಾಮಾಜಿಕ ಜಾಲತಾಣದ ಸಕ್ರಿಯ ತಂಡ, ಆದರೆ ಕಳೆದ ಒಂದು ವರ್ಷ ಹಿಂದೆ ನಡೆದ ಕಹಿ ಘಟನೆ ನಮ್ಮ ಆಲೋಚನೆಗಳನ್ನೇ ಬದಲಾಯಿಸಿತು, ರಸ್ತೆ ಅಪಘಾತಕ್ಕೆ ಸಿಲುಕಿ ನಮ್ಮ ತಂಡದ ಸದಸ್ಯನ ಮರಣ ಈ ತಂಡಕ್ಕೆ ಅಪಾರ ನೋವುಂಟು ಮಾಡಿತ್ತು, ಆದರೆ ಆತನ ಹೆಸರಿನಲ್ಲಿ ಮತ್ತಷ್ಟು ಸಾಮಾಜಿಕ ಚಟುವಟಿಕೆಯನ್ನು ಮುಂದುವರಿಸಬೇಕು ಎಂದು ಪಣತೊಟ್ಟ ನಾವುಗಳು ಕಳೆದ ಬಾರಿ ರಕ್ತದಾನ ಶಿಬಿರ ಹಾಗೂ ಕ್ರೀಡಾ ಚಟುವಟಿಕೆಯನ್ನು ನಡೆಸಿ ಅದರಲ್ಲಿ ಉಳಿದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ತಾಲೂಕಿನ ಐದು ಬಡ ಪ್ರತಿಭಾನ್ವಿತಾ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಭರಿಸಿರುತ್ತೇವೆ, ಈ ಬಾರಿಯೂ ಮತ್ತಷ್ಟು ನವ ಯೋಚನೆಗಳ ಜೊತೆಗೆ ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ.
ಈ ಸಮಾಜಮುಖಿ ಕಾರ್ಯಕರ್ಮದಲ್ಲಿ ತಾವೆಲ್ಲರೂ ಪಾಲ್ಗೊಂಡು, ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Home Uncategorized ಫೆ.21 ರಂದು ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಸಾಂಸ್ಕೃತಿಕ ಉತ್ಸವ

