ಭದ್ರಗಿರಿ : ಆಷಾಢ ಏಕಾದಶಿ ಅಖಂಡ ಭಜನಾ ಮಹೋತ್ಸವ

0
8

ದಕ್ಷಿಣ ಪಂಢರಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಷಾಢ ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವವು ತಾ. 06.07.2025 ರ ಆದಿತ್ಯವಾರ ಬೆಳಿಗ್ಗೆ 8.00 ಕ್ಕೆ ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಾಲನದಿಂದ ಪ್ರಾರಂಭವಾಯಿತು .

ಈ ಸಂದರ್ಭದಲ್ಲಿ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ,ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಸತೀಶ ಕಿಣಿ ಬೆಳ್ವೆ, ಪ್ರಭಾಕರ ಭಟ್, ಗಣೇಶ ಪೈ ಪರ್ಕಳ, ಕೆ ಸಿ ಪ್ರಭು , ಉದಯ ಪಡಿಯಾರ್, ಮಹೇಶ ಆಚಾರ್ಯ, ಗಿರಿಧರ ರಾವ್ , ರಘುವೀರ ಆಚಾರ್ಯ , ವಿಠ್ಠಲ ಆಚಾರ್ಯ ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ ಸಿ.ಕೃಷ್ಣ ಪೈ, ಕೆ.ಪಿ.ಕಿಣಿ , ಯೋಗೀಶ ಪೈ, ರವಿಕಲಾ ಪೈ, ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ ಮತ್ತು ಅರ್ಚಕರಾದ ಸದಾನಂದ ಆಚಾರ್ಯ, ಕೃಷ್ಣಾನಂದ ಶರ್ಮ ಮತ್ತು ಭಜಕರು ಉಪಸ್ಥಿತರಿದ್ದರು . ಈ ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ 14 ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದವು. ರಾತ್ರಿಯ ಪ್ರಸನ್ನಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು .

LEAVE A REPLY

Please enter your comment!
Please enter your name here