ದಕ್ಷಿಣ ಪಂಢರಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಕಾರ್ತೀಕ ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವ ಮತ್ತು ದೀಪೋತ್ಸವ ವು 02.11.2025 ರ ಆದಿತ್ಯವಾರ ಬೆಳಿಗ್ಗೆ 8.00 ಕ್ಕೆ ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಲನದಿಂದ ಪ್ರಾರಂಭವಾಯಿತು .
ಈ ಸಂದರ್ಭದಲ್ಲಿ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ,ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರು , ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ ಮತ್ತು ಅರ್ಚಕರಾದ ಸದಾನಂದ ಆಚಾರ್ಯ, ಕೃಷ್ಣಾನಂದ ಶರ್ಮ ಮತ್ತು ಭಜಕರು ಉಪಸ್ಥಿತರಿದ್ದರು . ಈ ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ 14 ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದವು. ರಾತ್ರಿ ದೀಪೋತ್ಸವ ಹಾಗೂ ಪ್ರಸನ್ನಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು .

