ಭಾರತ ರತ್ನ ದಿ| ಸರ್. ಎಂ. ವಿಶ್ವೇಶ್ವರಯ್ಯ ರವರ ಕರ್ತವ್ಯ ನಿಷ್ಠೆ ಮತ್ತು ಆಡಳಿತ ಕ್ಷಮತೆ ಇಂಜಿನಿಯರ್ಸ್‌ಗಳಿಗೆ ಮಾದರಿ

0
213

ಮಂಗಳೂರು : “ಭಾರತ ರತ್ನ ದಿ| ಸರ್. ಎಂ. ವಿಶ್ವೇಶ್ವರಯ್ಯನವರು ಒಬ್ಬ ಗಣ್ಯ, ಮೇಧಾವಿ ಮತ್ತು ಅನುಭವಿ ಖ್ಯಾತ ನಿಷ್ಠಾವಂತ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು ಅವರ ವೃತ್ತಿ, ಕೌಶಲ್ಯ, ಅಸಾಧರಣ ಪ್ರತಿಭೆ ಮತ್ತು ಶ್ರೇಷ್ಠ ಸಾಧನೆ ದೇಶದ ಎಲ್ಲಾ ಇಂಜಿನಿಯರ್‌ಗಳಿಗೆ ಮಾದರಿ, ತಮ್ಮ ವಿಶಿಷ್ಟ ಕಾರ್ಯಕ್ಷಮತೆ ಮೂಲಕ ಇಂಜಿನಿಯರ್‌ಗಳ ಶಕ್ತಿ ಸಾಮರ್ಥ್ಯ ಕೌಶಲ್ಯ ಎಂಬುದನ್ನು ದೇಶಕ್ಕೆ ನಿದರ್ಶನ ನೀಡಿದ ವಿಶ್ವ ಮನ್ನಣೆ ಪಡೆದ ಶ್ರೇಷ್ಠ ವ್ಯಕ್ತಿ” ಎಂದು ನಗರದ ಖ್ಯಾತ ಇಂಜಿನಿಯರ್, ಬಂಟ್ವಾಳ ಕೆ.ಪಿ.ಟಿ. ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಹಾಗೂ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆದ ಡಾ. ಚಿನ್ನಗಿರಿಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅವರು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾಯೋಜನೆಯ ಅಂಗವಾಗಿ ತಾ: 18.09.2025 ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ “ಇಂಜಿನಿಯರ್ಸ್‌ ದಿನಾಚರಣೆ” ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಅವರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಹಾಗೂ ಆಡಳಿತ ಕ್ಷಮತೆ ಇಂದಿನ ಇಂಜಿನಿಯರ್ಸ್‌ಗಳಿಗೆ ಮಾದರಿ ಎಂದು ನುಡಿದರು.

ಈ ಸಂದರ್ಭದಲ್ಲಿ ನಗರದ ಖ್ಯಾತ ಸಿವಿಲ್ ಇಂಜಿನಿಯರ್ ಸತೀಶ್ ರಾವ್ ಇಡ್ಯಾ ಅವರು ಇಂಜಿನಿಯರ್ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಸಾಧಿಸಿದ ಅಪ್ರತಿಮ ಸಾಧನೆಗಳನ್ನು ಪರಿಗಣಿಸಿ ರೋಟರಿ ಸಂಸ್ಥೆಯ “ಆದರ್ಶ ಇಂಜಿನಿಯರ್” ಪ್ರಸಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು ಜವಾಬ್ದಾರಿ ಹೆಚ್ಚಿದೆ ಮತ್ತು ಇನ್ನಷ್ಟು ಸಾಧಿಸಲು ಪ್ರೇರಣೆಯಾಗಿದೆ ಎಂದು ನುಡಿದು, ಇಂಜಿನಿಯರ್ ವೃತ್ತಿ ಒಂದು ಗೌರವಾನ್ವಿತ ವೃತ್ತಿಯಾಗಿದ್ದು, ಯುವ ಇಂಜಿನಿಯರ್‌ಗಳು ನೂತನ ವಿನ್ಯಾಸಗಳಿಗೆ ಪ್ರಾದ್ಯಾನತೆ ನೀಡಬೇಕೆಂದು ಕರೆ ನೀಡಿ ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಯುವಜನ ಸೇವೆ ಯೋಜನೆಯ ನಿರ್ದೇಶಕರಾದ ನಿತಿನ್ ದೇವಾಡಿಗ ರವರು ಪ್ರಶಸ್ತಿ ವಿಜೇತರರ ಪರಿಚಯ, ಸಾಧನೆಗಳ ವಿವರಣೆ ನೀಡಿ ಅಭಿನಂದನಾ ಭಾಷಣ ಮಾಡಿದರು.

ಸಂಸ್ಥೆಯ ಅಧ್ಯಕ್ಷೆ ಸಜ್ನ ಭಾಸ್ಕರ್‌ರವರು ಸ್ವಾಗತಿಸಿ ಇಂಜಿನಿಯರ್ಸ್‌ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಂಸ್ಥೆಯ ಭವಿಸ್ಯದ ಸಮಾಜ ಸೇವಾ ಚಟುವಟಿಕೆಗಳ ವಿವರ ನೀಡಿ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕçತಿಕ ಸ್ವಾರ್ಧಾಕೂಟದಲ್ಲಿ ವಿಜೇತರಾದವರನ್ನು ಹಾಗೂ ಇಂಜಿನಿಯರ್ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಪದ್ಮನಾಭ ನಾಯಕ್ ಸಂಸ್ಥೆಯ ಮಾಸಿಕ ವರದಿಯನ್ನು ಮಂಡಿಸಿ ಬಳಿಕ ವಂದಿಸಿದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ರೈ, ಸಂಸ್ಥೆಯ ಮಾಜಿ ಅಧ್ಯಕ್ಷ ಭಸವ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here