ಉಡುಪಿ: ಅಜಿತ್ ಪವರ್ ಮೇಲೆ ಅರವತ್ತು ಸಾವಿರ ಕೋಟಿ ಆರೋಪವಿತ್ತು. ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದು ಶುದ್ಧಿ ಮಾಡಿದ್ದಾರೆ. ಯಾರು ದುಡ್ಡು ಕೊಡ್ತಾರೋ ಅಂತವರನ್ನ ಹಿಡ್ಕೊಂಡು ಪಾರ್ಟಿಗೆ ಸೇರಿಸ್ತಾರೆ. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್ ಪವಾರ್ ಹಣ ಕೊಟ್ಟಿದ್ದಾರೆ. ಬಿಜೆಪಿಯವರ ಹತ್ತಿರ ವಾಷಿಂಗ್ ಪೌಡರ್ ನಿಮಾರ್ ಮಿಷಿನ್ ಇದೆ ಎಂದು ಸಚಿವ ಲಾಡ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಭ್ರಷ್ಟಾಚಾರಿಗಳಿರುತ್ತಾರೆ ಅವರನ್ನು ವಾಷಿಂಗ್ ಪೌಡರ್ ನಿರ್ಮಾ ಮಿಷನ್ಗೆ ಹಾಕುತ್ತಾರೆ. 25 ರಾಜಕಾರಣಿಗಳನ್ನು ಈ ರೀತಿ ಮಾಡಿದ್ದಾರೆ. ಬಿಜೆಪಿ ಸೇರಿದ ಕೂಡಲೇ ಎಲ್ಲರೂ ಪ್ರಾಮಾಣಿಕರಾಗಿ ಬಿಡ್ತಾರೆ ಎಂದು ತಿಳಿಸಿದರು.
ಮುಟ್ಟಿನ ರಜೆ ಮಹಿಳಾಪರ ಕಾಳಜಿಯ ದ್ಯೋತಕ
ಹೆಣ್ಣು ಮಕ್ಕಳ ಮುಟ್ಟಿನ ರಜೆ ವಿಚಾರದಲ್ಲಿ ಪರ ವಿರೋಧ ಏನೇ ಇದ್ದರೂ ಇದೊಂದು ಪ್ರಗತಿಪರ ಬಿಲ್ ಆಗಿದೆ. ಕರ್ನಾಟಕ ಸರ್ಕಾರ ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದೆ. ಬುದ್ಧ ಬಸವ ಅಂಬೇಡ್ಕರ್ ಸಿದ್ಧಾಂತ ಆಧಾರದಲ್ಲಿ ತೀರ್ಮಾನ ಕೈಗೊಂಡಿದೆ. ಇದು ಮಹಿಳಾಪರ ಕಾಳಜಿಯ ದ್ಯೋತಕವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಒರಿಸ್ಸಾದ ರಂಜಿತಾ ಪ್ರಿಯದರ್ಶಿನಿ ಎಂಬುವವರು ನನ್ನನ್ನು ಭೇಟಿಯಾಗಿದ್ದರು. ಸೈಕಲ್ ಮುಖಾಂತರ ಆಕೆ ಜಾಗೃತಿ ಮೂಡಿಸುತ್ತಿದ್ದರು. ಅವರೇ ವರ್ಷದ ಹಿಂದೆ ಈ ಪ್ರಪೋಸಲ್ ಕೊಟ್ಟವರು. ಇದಕ್ಕಾಗಿ ನಾವು ಸಮಿತಿ ರಚನೆ ಮಾಡಿದ್ದೆವು. ರಾಜ್ಯಾದ್ಯಂತ ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಿದ್ದೇವೆ. ಗಾಮೆಂರ್ಟ್ ಇಂಡಸ್ಟ್ರಿ ಸೇರಿದಂತೆ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ಹೆಣ್ಣು ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. 12 ತಿಂಗಳಲ್ಲಿ 12 ದಿನ ರಜೆ ಮಾಡಬಹುದು. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಮುಖ್ಯಮಂತ್ರಿಗಳು ಪ್ರತಿ ವರ್ಷ ಔತಣಕೂಟ ಕರೆಯುತ್ತಾರೆ. ಇದೇನು ಹೊಸತಲ್ಲ ಕಳೆದ ಬಾರಿಯೂ ಕರೆದಿದ್ದರು. ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ ರಚನೆ ಆಗುವುದು ಸಹಜ ಪ್ರಕ್ರಿಯೆ. ಯಾವಾಗ ಮಾಡಬೇಕು ಬೇಡ ಅನ್ನೋದನ್ನು ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು, ಹೈಕಮಾಂಡ್ ತೀಮಾರ್ನ ಮಾಡುತ್ತಾರೆ ಎಂದರು.