ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬ್ರಹ್ಮಗಿರಿ-ಅಂಬಲಪಾಡಿ ಮುಖ್ಯ ರಸ್ತೆಯಲ್ಲಿರುವ ದುರ್ಗಾಶ್ರೀ ಬಿಲ್ಡಿಂಗ್ ಬ್ರಹ್ಮಗಿರಿಯಲ್ಲಿ ಶುಭಾರಂಭಗೊಂಡಿತು.
ಕಳೆದ 4 ವರ್ಷಗಳಿಂದ ಅಂಬಲಪಾಡಿ ಕಾರ್ತಿಕ ಬಿಲ್ಡಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಜನ ಔಷಧಿ ಕೇಂದ್ರ ಸ್ಥಳಾಂತರಗೊಂಡು ದುರ್ಗಾಶ್ರೀ ಬಿಲ್ಡಿಂಗ್ ಬ್ರಹ್ಮಗಿರಿಯಲ್ಲಿ ಶುಭಾರಂಭಗೊಂಡಿದೆ.
ಕೇಂದ್ರ ಸರಕಾರದ ಅಧೀನದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ಉತ್ತಮ ಗುಣ ಮಟ್ಟದ ಹಾಗೂ ಜನ ಸಾಮಾನ್ಯರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೂರಾರು ಉತ್ಪನ್ನಗಳು ದೊರೆಯುತ್ತದೆ.

