ಬೆಂಗಳೂರು: ವಿಜಯನಗರದಲ್ಲಿ ನಡೆದ ಚಂದ್ರಗುಪ್ತ ಮೌರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ., 15ನೇ ಸರ್ವಸದಸ್ಯರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಚರ್ಮರೋಗ ತಜ್ಞರಾದ ಡಾಕ್ಟರ್ ಗಿರೀಶ್ ರವರು ಉದ್ಘಾಟಿಸಿದರು.
ಕರ್ನಾಟಕ ಗೃಹಮಂಡಳಿಯ ಶ್ರೀಮತಿ ದಿವ್ಯ ಮಂಜುನಾಥ್, ರಾಮನಗರ ಜಿಲ್ಲಾ ಪಂಚಯೋಜನೆಯ ನಿರ್ದೇಶಕರು, ಮುರಳಿ, ಮ.ನಾ ಮೂರ್ತಿ, ಅತ್ತಿಗುಪ್ಪೆ ಚಂದ್ರಪ್ಪ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಚಂದ್ರ ಮೌರ್ಯ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಅಧ್ಯಕ್ಷ ರಾದ ಪುಟ್ಟರಾಜು, ಉಪಾಧ್ಯಕ್ಷ ಕೆ. ವಿನೋದ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಕೃಷ್ಣ, ಸುದರ್ಶನ್,
ಸಹಕಾರಿಯ ಆಡಳಿತ ಮಂಡಳಿ ನಿರ್ದೇಶಕರು ಜಗದೀಶ್ ಪಿ, ಕೃಷ್ಣಗೌಡ ಪಾಟೀಲ್, ಮಹೇಶ, ಡಾ. ನಂದೀಶ್ ಹೆಚ್.ಎಂ, ನಾಗರಾಜ ಮೂರ್ತಿ ಎಸ್, ರವಿ ಕೆ.ಬಿ, ಸಂತೋಷ್ ಬಿ.ಎಂ, ಸೋಮಶೇಖರ್ ಕೆ, ಶರತ್ ಹೆಚ್.ಎನ್, ಮಂಜುನಾಥ್, ಶ್ರೀಮತಿ ಅನುರಾಧ, ಶ್ರೀಮತಿ ಪ್ರೇಮ, ಶ್ರೀಮತಿ ರತ್ನಮ್ಮ ಭಾಗವಹಿಸಿದ್ದರು.

