ಚಿಟ್ಪಾಡಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ , ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ , ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೀಡಿನಗುಡ್ಡೆ ಉಡುಪಿ , ರೋಟರಿ ಕ್ಲಬ್ ಮಣಿಪಾಲ ಹಾಗೂ ಸಿ ಎಸ್ ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಉಡುಪಿ ಇವರಗಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಮೇಳ ( ವೈದ್ಯಕೀಯ ಶಿಬಿರ ) ಸೆ . 4 ರಂದು ಚಿಟ್ಪಾಡಿ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ವಿಶ್ವನಾಥ ಶೆಣೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು , ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷರಾದ ಮಧುಸೂಧನ್ ಹೇರೂರು , ಜಯಂಟ್ಸ್ ಗ್ರೂಪ್ ಉಡುಪಿ ಕಾರ್ಯದರ್ಶಿ ದಿವಾಕರ್ ಪೂಜಾರಿ , ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಶೆಣೈ , ರವಿನಾಥ್ ಪೈ , ರಾಮಚಂದ್ರ ಶೆಣೈ , ವಿಶ್ವಭಾರತಿ ಸೊಸೈಟಿಯ ಸಿಇಓ ಶಶಿಕಿರಣ್ ಉಳಿತ್ತಾಯ, ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷೆ ಶಶಿಕಲಾ ರಾಜ ವರ್ಮ. ಮಿಷನ್ ಆಸ್ಪತ್ರೆಯ pro ರೋಹಿ ರತ್ನಾಕರ, ಉಡುಪಿ ಮಿಷನ್ ಆಸ್ಪತ್ರೆಯ ನುರಿತ ತಜ್ಞವೈದ್ಯರುಗಳಾದ ಪ್ರಸೂತಿ ತಜ್ಞರಾದ ಡಾ| ದೀಪಾ ವೈ ರಾವ್, ಡಾ| ಅಭಿನಯ್ ಆಶೋಕ್, ನೇತ್ರ ತಜ್ಞರು , ಡಾ| ಅರ್ಜುನ್ ಬಳ್ಳಾಲ್, ಕೀಲು ಮತ್ತು ಎಲುಬು ತಜ್ಞರು , ಡಾ| ವೈಭವ್, ಸಾಮಾನ್ಯ ಆರೋಗ್ಯತಜ್ಞರು ಭಾಗವಹಿಸಿದರು. ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ಸಾಮಾನ್ಯ ಆರೋಗ್ಯ, ಹಾಗೂ ಮಧುಮೇಹ ತಪಾಸಣೆ ನಡೆಸಿ. ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ವೈದ್ಯಕೀಯ ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಜನ ಪ್ರಯೋಜನಾ ಪಡೆದುಕೊಂಡರು ಶ್ರೀದೇವರ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಯಲ್ಲಿ ಸಾವಿರಾರು ಭಕ್ತರೊ ಭೋಜನ ಪ್ರಸಾದ ಸ್ವೀಕರಿಸಿದರು.
ಸಂಯೋಜಕರಾದ ದೇವದಾಸ್ ಕಾಮತ್ ಉಡುಪಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.