4, 5 ಹಾಗೂ 6 ರಂದುಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು
ವಿವೇಕಾನಂದ ಪದವಿಪೂರ್ವಕಾಲೇಜಿನ 60 ನೇ ವರ್ಷಾಚರಣೆ
ಸಾಮಾಜಿಕ ಹಾಗೂ ಕಲಾ ಕ್ಷೇತ್ರದ ಹಲವು ಗಣ್ಯರು ಹಾಗೂ ವಾಗ್ಮಿಗಳು ಭಾಗಿ
ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ ವಿವೇಕಾನಂದ ಪದವಿಪೂರ್ವಕಾಲೇಜು 60 ಸಂವತ್ಸರಗಳನ್ನು ಪೂರೈಸುತ್ತಿದ್ದು ಈ ಸಂಭ್ರಮಾಚರಣೆಯ ಸಂದರ್ಭದಲ್ಲಿವಿವೇಕಾನAದ ಪದವಿಪೂರ್ವಕಾಲೇಜಿನಲ್ಲಿ ನವಂಬರ್4,5,6 ನೇ ತಾರೀಕು ಮಂಗಳವಾರ, ಬುಧವಾರ ಮತ್ತು ಗುರುವಾರದಂದು ಪ್ರಸಕ್ತ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕೋತ್ಸವವು ನಡೆಯಲಿದೆ.
ಸಾಧನಾದರ್ಪಣಂ
ನವAಬರ್ 4ರ ಬೆಳಗ್ಗೆ 7.30 ಕ್ಕೆ ಸರಿಯಾಗಿಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿಗಣಹೋಮ ನಡೆಯಲಿದ್ದು, ಮಧ್ಯಾಹ್ನ 1.30 ಕ್ಕೆ ಸರಿಯಾಗಿ ವೀರರಾಣಿಅಬ್ಬಕ್ಕ ವೇದಿಕೆಯಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಬಳಿಕಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರು ಹಾಗೂ ಕಾಲೇಜು ಕ್ರೀಡಾಕೂಟದ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಗೌರವಿಸುವ‘ಸಾಧನಾದರ್ಪಣಂʼಕಾರ್ಯಕ್ರಮನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಿವೇಕಾನಂದಪದವಿಪೂರ್ವಕಾಲೇಜಿನಆಡಳಿತಮAಡಳಿನಿರ್ದೇಶಕರಾದ ಡಾ. ಕೆ.ಎನ್.ಸುಬ್ರಹ್ಮಣ್ಯವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕಾನಂದಮಹಾವಿದ್ಯಾಲಯದನಿವೃತ್ತಪ್ರಾAಶುಪಾಲರಾದಪ್ರೊ. ವಿ.ಜಿ. ಭಟ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಲೆಕ್ಕ ಪರಿಶೋಧಕರಾದ ಸಿ.ಎ. ದೀಪ್ಷಿಕ್ ಕೆ. ಭಾಗಿಯಾಗಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಮುರಳೀಕೃಷ್ಣ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಪರಂಪರಾದರ್ಶನಂ
ನವAಬರ್ 5ನೇ ತಾರೀಕಿಗೆ‘ಪರಂಪರಾ ದರ್ಶನಂʼ ಎಂಬಶೀರ್ಷಿಕೆಯೊAದಿಗೆಸಭಾ ಕಾರ್ಯಕ್ರಮವುನಡೆಯಲಿದ್ದು, ಇದರಅಧ್ಯಕ್ಷತೆಯನ್ನು ಕಾಲೇಜು ಆಡಳಿತಮಂಡಳಿಯಅಧ್ಯಕ್ಷರಾದರವೀAದ್ರಪಿ. ಇವರುವಹಿಸಿಕೊಳ್ಳಲಿದ್ದಾರೆ. ಮೂಡಬಿದಿರೆಯಖ್ಯಾತವಾಗ್ಮಿಗಳಾದಎನ್. ಆರ್ ದಾಮೋದರಶರ್ಮಾ ಇವರುಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಸತೀಶ್ ರಾವ್ ಪಿ,ಉಪಾಧ್ಯಕ್ಷರು, ಆಡಳಿತಮಂಡಳಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಆಗಮಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಕೋಶಾಧಿಕಾರಿಗಳಾದ ಸಚಿನ್ ಶೆಣೈ ಕೆ. ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದಅಧ್ಯಕ್ಷರಾದ ಹರಿಣಾಕ್ಷಿಜೆ. ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮವು ಈ ದಿನ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಲಿದೆ.
ಷಷ್ಠ್ಯಬ್ದಆಚರಣಂ
ನವಂಬರ್ 6ನೇ ತಾರೀಕಿನಂದು ಸಂಸ್ಥೆಯ 60ನೇ ವರ್ಷಾಚರಣೆಯನ್ನು ಆಚರಿಸುವ ಸಲುವಾಗಿ ‘ಷಷ್ಠ್ಯಬ್ದ ಆಚರಣಂʼಎAಬಶೀರ್ಷಿಕೆಯೊAದಿಗೆಕಾಲೇಜುವಾರ್ಷಿಕೋತ್ಸವವುನಡೆಯಲಿದೆ. ಮೂರನೇದಿನದಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದರವೀಂದ್ರ ಪಿ. ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ತುಳು ಚಲನಚಿತ್ರ ನಟರು ಹಾಗೂ ಕಾರ್ಯಕ್ರಮದ ಪ್ರಧಾನ ವಕ್ತಾರರಾಗಿಸಂವಾದಚಾನಲ್, ಬೆಂಗಳೂರು ಇದರ ಸಂಪಾದಕರಾದ ವೃಷಾಂಕ್ ಭಟ್ ನಿವಣೆ ಪಾಲ್ಗೊಳ್ಳಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದಇಂದಿರಾ ಬಿ. ಕೆ. ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಅರ್ಹವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ವಿತರಣೆ ಈ ದಿನ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಲಿದೆ.

