ಉಡುಪಿ: ದೈವಜ್ಞ ಬ್ರಾಹ್ಮಣ ಸಂಘ (ರಿ ) ಒಳಕಾಡು ಉಡುಪಿ ಇದರ 43 ನೇ ವರ್ಷದ ವಾರ್ಷಿಕೋತ್ಸವ ಜುಲೈ 20 ರಂದು ಉಡುಪಿ ಒಳಕಾಡಿನ ದೈವಜ್ಞ ಮಂದಿರ ದಲ್ಲಿ ನೆಡೆಯಿತು. ಶ್ರೀದೇವರ ಸನ್ನಿಧಿಯಲ್ಲಿ ಸಂಘದ ಅಧ್ಯಕ್ಷರಾದ ಎಸ್ ಸುಬ್ರಮಣ್ಯ ಶೇಟ್ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಗಣಹೋಮ , ಸತ್ಯನಾರಾಯಣ ಪೂಜೆಯನ್ನು ವೇದ ಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನೆಡೆಸಿಕೊಟ್ಟರು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಿತು . ಸಂಜೆ ನೆಡೆದ 43 ನೇ ವರ್ಷದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಎಸ್ ಸುಬ್ರಮಣ್ಯ ಶೇಟ್ ಅಧ್ಯಕ್ಷತೆ ವಹಿಸಿಕೊಡರು , ಮುಖ್ಯ ಅತಿಥಿಯಾಗಿ ಉಡುಪಿ ವಿಭಾಗದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಪ್ರಸನ್ನ ಕುಮಾರ್ ಶೇಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ , ನಮ್ಮ ಹಿರಿಯರು ಸಮಾಜದಲ್ಲಿ ಜಾತಿಯ ಸಂಘಟನೆ ಕಟ್ಟಿ ಬೆಳಸಿ ದೈವಜ್ಞ ಮಂದಿರ , ಸುಂದರ ಸಭಾಂಗಣ ನಿರ್ಮಿಸಿ ಯುವಜನತೆಯನ್ನು ಒಂದುಗೂಡಿಸಿ ಅದರ ಮೂಲಕ ಸಮಾಜಸೇವೆ ಹಾಗೂ ವಿದ್ಯಾರ್ಥಿ ಪುರಸ್ಕಾರ , ಆರ್ಥಿಕ ಸಹಾಯ , ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಸನ್ನ ಕುಮಾರ್ ಶೇಟ್ ರವರನ್ನು ಗೌರವಿಸಲಾಯಿತು , ಪರಿಸರ ಪ್ರೇಮಿ ಉರಗ ತಜ್ಞ ಸಾವಿರಾರು ಹಾವುಗಳ ಸಂರಕ್ಷಣೆಗೈದ ಅಕ್ಷಯ ಶೇಟ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು , ದೈವಜ್ಞ ಮಂದಿರದ ಮೆನೇಜರ್ ಸೇವೆಸಲ್ಲಿಸುತ್ತಿರುವ ವೆಂಕಟೇಶ್ ಶೇಟ್ ರವರನ್ನು ಗೌರವಿಸಲಾಯಿತು
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸತ್ಯನಾರಾಯಣ ಶೇಟ್ , ಕಾರ್ಯದರ್ಶಿ ಮಂಜುನಾಥ್ ಶೇಟ್ , ಜೊತೆ ಕಾರ್ಯದರ್ಶಿ ಮಹೇಶ್ ಶೇಟ್ , ದೈವಜ್ಞ ಬ್ರಾಹ್ಮಣ ಯುವಕ ಮಂಡಳಿಯ ಅಧ್ಯಕ್ಷ ಕಿರಣ್ ಶೇಟ್ , ನಾಗಭೂಷಣ ಶೇಟ್ ಸ್ವಾಗತಿಸಿದರು , ರಾಘವೇಂದ್ರ ಶೇಟ್ , ಅನಘ ರೇವಣಕರ್ ಕಾರ್ಯಕ್ರಮ ನಿರೂಪಿಸಿದರು , ದೈವಜ್ಞ ಬ್ರಾಹ್ಮಣ ಸಂಘದ ಪಧಾಧಿಕಾರಿಗಳು ಸಹಕರಿಸಿದರು , ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ , ದೈವಜ್ಞ ಬ್ರಾಹ್ಮಣ ಯುವಕ ಮಂಡಳಿಯ ಸಹಕಾರದಲ್ಲಿ ಮನೋರಂಜನಾ ಕಾರ್ಯಕ್ರಮ ನೆಡೆಸಿಕೊಟ್ಟರು