ವೇಣೂರು: ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನೂತನವಾಗಿ ವ್ಯವಸ್ಥಾಪನ ಸಮಿತಿ ಆಯ್ಕೆಗೊಂಡಿದ್ದು, ಇಂದು ಬೆಳ್ತಂಗಡಿಯ ರಕ್ಷಿತ್ ಶಿವರಾಂ ಅವರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದರು. ಸಮಿತಿ ಅಧ್ಯಕ್ಷ ಸತೀಶ್ ಚಿಗುರು , ಸಮಿತಿಯಲ್ಲಿ ದೇಗುಲದ ಅಸ್ರಣ್ಣರಾದ ಚಂದ್ರಶೇಖರ ಭಟ್, ಪಿ. ದೇಜಪ್ಪ ಶೆಟ್ಟಿ, ನೀಲಯ್ಯ, ಅರುಣ್ ಪೂಜಾರಿ ಜಾರಿಗೆದಡಿ, ಸೌಮ್ಯ ಅಶೋಕ್, ರತ್ನವತಿ ಜಯೇಂದ್ರ, ಸುದರ್ಶನ ಪೂಜಾರಿ ಕೊಳಂಗಜೆ, ಗೋಪಾಲ ಕನಡ ಮೂಡುಕೊಡಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಶಿಫಾರಸ್ಸಿನಂತೆ ಸಮಿತಿಯನ್ನು ರಚಿಸಲಾಗಿದ್ದು, ಅಭಿನಂದನೆ ಸಲ್ಲಿಸಿದರು.

