ತನ್ನ ಪ್ರಾಣವನ್ನೇ ಅರ್ಪಣೆ ಮಾಡಲು ಹೊರಟ ಸೈನಿಕರ‌ ಬಳಿ ಲಂಚ ಪಡೆದ ಭ್ರಷ್ಟಾಚಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ

0
231

ಭಾರತೀಯ ರೈಲ್ವೇಯ ಟಿಕೆಟ್ ತಪಾಸಣೆದಾರ (ಟಿಟಿಇ) ಒಬ್ಬರು ರೈಲಿನಲ್ಲಿ ಅ ಸೇನೆಯ ಅದೇಶದಂತೆ ತುರ್ತಾಗಿ ಗ್ರೌಂಡ್ ಜೀರೋ ಗಡಿಗೆ ಹಿಂತಿರುಗಬೇಕಾಗದ ಸೈನಿಕನ ಬಳಿ ರೈಲ್ವೇ ಇಲಾಖೆ ನೌಕರ ಲಂಚ ಕೇಳಿದ ಘಟನೆಯ ಬಗ್ಗೆ ಇತ್ತೀಚಿನ ಸುದ್ದಿಗಳು ವರದಿಯಾಗಿವೆ.

ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಸೇನಾ ಅಧಿಕಾರಿಗಳು ಸಹ ತಮ್ಮ ರಜೆಯನ್ನು ಅರ್ಧಕ್ಕೆ ಮುಗಿಸಿ, ತುರ್ತು ಸಮಯದಲ್ಲಿ ದೇಶವನ್ನು ರಕ್ಷಿಸಲು ಗಡಿಯಲ್ಲಿ ಕೆಲಸಕ್ಕೆ ಬೇಗನೆ ಮರಳುತ್ತಿದ್ದರು. ದೇಶದ ರಕ್ಷಣೆ ಅದೆಷ್ಟೋ ಸೈನಿಕರ ಜವಾಬ್ದಾರಿಯಾಗಿದೆ.
ಅದೇ ರೀತಿ ಇಲ್ಲೊಬ್ಬ ಸೈನಿಕರಿಗೆ ರಜೆಯಿಂದ ಮರಳಿ ಬರುವಂತೆ ಸೇನೆ ಸೂಚನೆ ನೀಡಿತ್ತು.

ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಗ್ವಾಲಿಯರ್ ನಿವಾಸಿಗಳಾದ ಸುಬೇದಾರ್ ವಿನೋದ್ ಕುಮಾರ್ ದುಬೆ ಮತ್ತು ಅಗ್ನಿವೀರ್ ಜಹೀರ್ ಖಾನ್ ಅವರು ತಮ್ಮ ಸಹಚರರೊಂದಿಗೆ ಮಾಲ್ವಾ ಎಕ್ಸ್‌ಪ್ರೆಸ್ 12919 ಅದರಂತೆ, ಮೂವರು ಸೇನಾ ಸೈನಿಕರು ಸಾಧ್ಯವಾದಷ್ಟು ಬೇಗ ರೈಲು ಹತ್ತುತ್ತಾರೆ.

ಆ ಟ್ರೈನ್ ನಲ್ಲಿ ಇದ್ದ ಟಿಟಿಇ ಲಂಚ ಕೇಳಿದ್ದು ಗಮನಕ್ಕೆ ಬಂದಾಗ, ಸೈನಿಕನ ದೂರಿನ ಆಧಾರದ ಮೇಲೆ ರೈಲ್ವೇ ಇಲಾಖೆ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ದೇಶದ ಸೈನಿಕರಿಗೆ ಗೌರವ ನೀಡಬೇಕೆಂದು ಒತ್ತಾಯಿಸಲಾಗಿದೆ. ರೈಲ್ವೇ ಇಲಾಖೆಯಿಂದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಭಾರತದಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ ಎನ್ನುವ ಬಗ್ಗೆ ದೇಶ ವಿದೇಶಗಳಲ್ಲಿ ಚರ್ಚೆ ಆಗುತ್ತಿದೆ.

https://www.youtube.com/live/MWgCzlJMUUg?si=6InYuBHYrEOi0Om7

LEAVE A REPLY

Please enter your comment!
Please enter your name here