ಶಿಸ್ತು ಬದ್ಧ ಜೀವನ ಶೈಲಿ ಮುಂದಿನ ಜೀವನಕ್ಕೆ ದಾರಿದೀಪ: ಕಮಾಂಡರ್ ಅಶ್ವಿನ್ ಎಂ ರಾವ್

0
57

ಶಿಸ್ತು ಬದ್ದ ಜೀವನ ಶೈಲಿ ಮುಂದಿನ ಜೀವನಕ್ಕೆ ದಾರಿದೀಪ. ವಿದ್ಯಾರ್ಥಿಗಳು ಸ್ವಂತಿಕೆಯನ್ನು ಬೆಳೆಸಿಕೊಂಡು ಮುಂದೆ ನಾನೇನಾಗಬೇಕು ಎಂಬುದನ್ನು ಇಂದೇ ನಿರ್ಧರಿಸಿಕೊಳ್ಳಬೇಕು ಎಂದು ನೇವಲ್ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ ರಾವ್ ಹೇಳಿದರು.

ಅವರು ರೋಟರಿ ಕ್ಲಬ್ ಕಾರ್ಕಳ ಮತ್ತು ಆನ್ಸ್ ಕ್ಲಬ್ ಕಾರ್ಕಳ ಇವರ ವತಿಯಿಂದ ಹಮ್ಮಿಕೊಂಡಿದ್ದ ” ಉಜ್ವಲ ನಾಳೆಗೆ ಪ್ರೇರಣೆ ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ್ರಾಯ ನಾಯಕ್ ರವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ,ಕಾರ್ಯದರ್ಶಿ ಚೇತನ್ ನಾಯಕ್, ಮುಖ್ಯ ಶಿಕ್ಷಕ ದಿವಾಕರ್ , ಆನ್ಸ್ ಚೇರ್ಮನ್ ವೃಂದಾ ಹರಿಪ್ರಕಾಶ್, ಅಧ್ಯಕ್ಷೆ ಜಯಂತಿ ಆನಂದ ನಾಯ್ಕ್, ಸಾವಿತ್ರಿ ಮನೋಹರ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಆನ್ಸ್ ಅಧ್ಯಕ್ಷೆ ಜಯಂತಿ ಆನಂದ ನಾಯ್ಕ್ ಸ್ವಾಗತಿಸಿದರು.ಆನ್ಸ್ ಕಾರ್ಯದರ್ಶಿ ಆಶಾ ಸೋನಿಯಾ ಡಿಮೆಲ್ಲೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here