ವರದಿ ರಾಯಿ ರಾಜ ಕುಮಾರ
ಕಂಚಿ ಕಾಮಕೋಟಿ ಪೀಠದ ಸ್ವಾಮೀಜಿಯವರ ತಮ್ಮ ಪಾದಯಾತ್ರೆಯ ಸಂದರ್ಭದಲ್ಲಿ ತಾವು ಉಪಯೋಗಿಸುತ್ತಿದ್ದ ವಸ್ತುಗಳನ್ನು ಕೊಂಡು ಹೋಗಲು ಬಳಸುತ್ತಿದ್ದ ಪವಿತ್ರ ರಿಕ್ಷಾವನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ನೀಡಿದರು. ಅವರ ಪಾದುಕೆಗಳು, ಅನುಷ್ಠಾನ ಪಾತ್ರೆಗಳು ಮತ್ತು ದರ್ಬಾಸನದ ವಸ್ತುಗಳನ್ನು ಕೊಂಡೊಯ್ಯಲು ಇದನ್ನು ಬಳಸುತ್ತಿದ್ದರು. ತಮ್ಮ ವರ್ಧಂತ್ಯುತ್ಸವದ ಸಂದರ್ಭದಲ್ಲಿ ದೊರಕಿದ ಈ ಅಪೂರ್ವ ಕೊಡುಗೆಗೆ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಸಂತಸ ವ್ಯಕ್ತಪಡಿಸಿದ್ದಾರೆ.
.

