ಮಂಗಳೂರು :-ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮಂಗಳೂರು ನಗರದ ಸಭೆಯು ಬಂಟ್ಸ್ ಹಾಸ್ಟೆಲ್, ಸಭಾಂಗಣ ಮಂಗಳೂರುನಲ್ಲಿ ಜನವರಿ 19,2026ರಂದು ನಡೆಯಿತು. ನೂತನ ಅಧ್ಯಕ್ಷರಾಗಿ ಡಾ ಅವಿನ್ ಆಳ್ವ ಕಾರ್ಯದರ್ಶಿಯಾಗಿ ಸೂರಜ್ ಶೆಟ್ಟಿ ಕೋಶಾಧಿಕಾರಿಯಾಗಿ ನ್ಯಾಯವಾದಿ ಮೋಹನ್ ದಾಸ್ ರೈ ಉಪಾಧ್ಯಕ್ಷರಾಗಿ ಭಾಸ್ಕರ್ ರೈ ಕಟ್ಟ, ಮಾಧವ ಉಲ್ಲಾಳ, ಪರಿಸರ ಕೃಷ್ಣಪ್ಪ ಬೊಂಡೇಲ್, ವಿಶ್ವನಾಥ ಆರ್ ಶೆಟ್ಟಿ ,ಜೋಸೆಫ್ ಪೆರ್ನಾಂಡಿಸ್ ಜೊತೆ ಕಾರ್ಯದರ್ಶಿಯಾಗಿ ಶೀಲಾ ಶೆಟ್ಟಿ ಅಡ್ಯಾರ್,ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಧನು ಮಹೇಶ್, ನಿಖಿಲ್ ರೈ, ರಾಜೇಶ್ ಅಮೀನ್, ವಂದನ, ಹೇಮಾವತಿ ಶೆಟ್ಟಿ ಮಲ್ಲಿಕಾ ರೈ, ಸುಧಾಕರ್ ಶೆಟ್ಟಿ, ಮುಂತಾದವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡರು.

ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ ರಾಜೇಶ್ ಆಳ್ವ, ಪ್ರಮೋದ್ ಸಪ್ರೆ ಮಂಗಳೂರು ತಾಲೂಕು ಸಂಚಾಲಕರಾದ ಅರವಿಂದ ಬೆಲ್ಚಡ. ತುಳು ವರ್ಲ್ಡ್ ಫೌಂಡೇಶನ್ ಕಾರ್ಯದರ್ಶಿ ಜಿಕೆ ಹರಿಪ್ರಸಾದ್ ರೈ ಕಾರಮೊಗರು ಗುತ್ತು ಸಭೆಯನ್ನು ನಿರ್ವಹಿಸಿ ಶುಭ ಹಾರೈಸಿದರು.

