ಪುದುಚೇರಿ: ಸಮಾಜಸೇವೆ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಡಾ. ಮಂದಾರ ರಾಜೇಶ್ ಭಟ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪುರಸ್ಕಾರ ಲಭಿಸಿದೆ.
ಅಮೆರಿಕನ್ ವಿಸ್ಡಮ್ ಪೀಸ್ ಎಜುಕೇಶನ್ ಅಕಾಡೆಮಿಯು (American Wisdom Peace Education Academy) ಜನವರಿ 25, 2026 ರಂದು ಪುದುಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇವರಿಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್ 2026’ ನೀಡಿ ಗೌರವಿಸಿದೆ.

ಈ ಪ್ರಶಸ್ತಿಯ ಜೊತೆಗೆ, ಪರಿಸರ ಕ್ಷೇತ್ರದಲ್ಲಿ ಅವರು ಮಾಡಿರುವ ಅಸಾಧಾರಣ ಸಾಧನೆಯನ್ನು ಪರಿಗಣಿಸಿ ‘ಕರ್ನಾಟಕ ರಾಜ್ಯ ಪರಿಸರ-ಶ್ರೇಷ್ಠತೆ ಪ್ರಶಸ್ತಿ 2025’ (Karnataka State Eco-Excellence Award) ಎಂಬ ಗೌರವ ಪದವಿಯನ್ನೂ ನೀಡಿ ಪುರಸ್ಕರಿಸಲಾಗಿದೆ.
ಡಾ. ಮಂದಾರ ರಾಜೇಶ್ ಭಟ್ ಅವರು ಸಮಾಜದ ಏಳಿಗೆಗಾಗಿ ತೋರಿದ ಸಮರ್ಪಣಾ ಮನೋಭಾವ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಗುರುತಿಸಿ ಈ ಅಭಿನಂದನಾ ಪತ್ರವನ್ನು ನೀಡಲಾಗಿದೆ. ಅಂತರರಾಷ್ಟ್ರೀಯ ಮಾನ್ಯತೆ ಸಂಸ್ಥೆ (IAO) ಮತ್ತು ISO 9001:2015 ಗುಣಮಟ್ಟದ ಮಾನ್ಯತೆ ಹೊಂದಿರುವ ಈ ಅಕಾಡೆಮಿಯು, ಭಟ್ ಅವರ ಸಮಾಜಮುಖಿ ಚಿಂತನೆಗಳಿಗೆ ಈ ಮೂಲಕ ಅತ್ಯುನ್ನತ ಗೌರವ ಸಲ್ಲಿಸಿದೆ.
ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕಳಕಳಿಯಲ್ಲಿ ಮುಂಚೂಣಿಯಲ್ಲಿರುವ ಡಾ. ಮಂದಾರ ರಾಜೇಶ್ ಭಟ್ ಅವರಿಗೆ ಸಂದ ಈ ಪ್ರಶಸ್ತಿಯು, ಅವರ ಸೇವಾ ಹಾದಿಗೆ ಸಂದ ಸಂದ ಗೌರವವಾಗಿದೆ.

