ವಿಶ್ರಾಂತ ಶಿಕ್ಷಕ ಮುಂಡಾಜೆ ಶಂಕರ್ ತಾಮನ್ಕರ್ ಅವರಿಂದ ಶೈಕ್ಷಣಿಕ ಸಹಾಯ ಹಸ್ತ, ಆಹಾರ ಕಿಟ್ ವಿತರಣೆ

0
10

ಬೆಳ್ತಂಗಡಿ: ದಿ ನಾರಾಯಣ ತಾಮನ್ಕರ್ ಮುಂಡಾಜೆಯವರ ಸ್ಮರಣಾರ್ಥವಾಗಿ ಅವರ ಮಗ ವಿಶ್ರಾಂತ ಅಧ್ಯಾಪಕ ಹಾಗೂ ಕವಿ ಶಂಕರ್ ಎನ್. ತಾಮನ್ಕರ್ ರವರು ಮತ್ತು ಸ್ವಾತಿ ತಾಮನ್ಕರ್ ಅವರು ತಮ್ಮ “ಪರಂಪರಾ” ಮನೆಯಲ್ಲಿ ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ಹಾಗೂ ಪ್ರತಿಭಾ ಸಂಪನ್ನ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾ ನಿಧಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮುಂಡಾಜೆ ಪರಿಸರದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ ರೂ. 5000 ದಂತೆ ವಿದ್ಯಾರ್ಥಿ ಸಹಾಯ ಹಸ್ತ, ಮೂರು ಮಂದಿ ಅರ್ಹ ನಾಗರಿಕರಿಗೆ ಆಹಾರ ಕಿಟ್ಟ್ ಹಾಗೂ ಒಬ್ಬ ನಾಗರಿಕರಿಗೆ ರೂ.5000 ಆರೋಗ್ಯ ಸಹಾಯ ಹಸ್ತವನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗಣೇಶ್ ಬಂಗೇರ ಅಧ್ಯಕ್ಷರು ಗ್ರಾಮ ಪಂಚಾಯತ್ ಮುಂಡಾಜೆ, ನಾಮದೇವ ರಾವ್ ಸಂಚಾಲಕರು ಯಂಗ್ ಚಾಲೆಂಜರ್ಸ್ ಮುಂಡಾಜೆ, ಉದ್ಯಮಿ ಅರೆಕ್ಕಲ್ ರಾಮಚಂದ್ರ ಭಟ್, ದಿಶಾ ಪಟವರ್ಧನ್ ಗ್ರಾಮ ಪಂಚಾಯತ್ ಸದಸ್ಯರು ಮುಂಡಾಜೆ ಯವರು ಭಾಗವಹಿಸಿ ಶುಭ ಕೋರಿದರು.ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಶಂಕರ್ ತಾಮನ್ಕರರವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.

LEAVE A REPLY

Please enter your comment!
Please enter your name here