ಹೆಬ್ರಿ : ಶ್ರೀ ಅನಂತಪದ್ಮನಾಭ ಆಟೋರಿಕ್ಷಾ ಚಾಲಕ ಮಾಲಕರ ಸಂಘ (ರಿ.) ಹೆಬ್ರಿ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘ ಹೆಬ್ರಿ, ಶ್ರೀ ಮಹಾಗಣಪತಿ ಆಟೋರಿಕ್ಷಾ ಚಾಲಕ ಮಾಲಕರ ಸಂಘ ಮುದ್ರಾಡಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮುನಿಯಾಲು ಹೆಬ್ರಿ, ಮಾಲಕರು ಮತ್ತು ಸಿಬ್ಬಂದಿ ವರ್ಗ ರೈತಸೇವಾ ಗ್ರಾಮೋದ್ಯೋಗ ಕನ್ಯಾನ ಹೆಬ್ರಿ, ಶ್ರೀ ಭರತ್ ಕುಮಾರ್ ಶೆಟ್ಟಿ, ಮನು ಲಾ ಚೇಂಬರ್ ಹೆಬ್ರಿ, ಹೆಬ್ರಿ ಕಣ್ಣಿನ ಆಸ್ಪತ್ರೆ, ಸ್ಫಟಿಕ ಪ್ಲಾಜ್ಜಾ ಕುಚ್ಚೂರು ರಸ್ತೆ ಹೆಬ್ರಿ ಮತ್ತು ಸುಪ್ರೀಯಾ ಡಯೋಗ್ನಾಸ್ಟಿಕ್ ಅಂಬಲಪಾಡಿ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಬಿಪಿ ಹಾಗೂ ಮಧುಮೇಹ ತಪಾಸಣೆ ಶಿಬಿರವು ಜು. 6ರಂದು ಬೆಳಿಗ್ಗೆ 9-00 ಗಂಟೆಯಿಂದ 1 ಗಂಟೆಯವರೆಗೆ ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಲಿದೆ. ಶಿಬಿರದಲ್ಲಿ ಅವಶ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.