ಜ್ಞಾನಭಾರತಿ ಹೈಸ್ಕೂಲ್ ಉಪ್ಪಿನಂಗಡಿ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕರಂಜಿ ಸ್ಪರ್ಧೆಯಲ್ಲಿ ಕವ್ವಾಲಿ ಮತ್ತು ಇಂಗ್ಲಿಷ್ ಭಾಷಣ ಪ್ರಶಸ್ತಿ 19-11-2025 ರಂದು
ಸರಕಾರಿ ಶಾಲಾ ಶಿಕ್ಷಣ ಇಲಾಖೆಯ ಆಡಳಿತದಲ್ಲಿ ಬೈಪಾಡಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ಕರಂಜಿ ಪ್ರತಿಭಾ ಅನ್ವೇಷಣಾ ಕಾರ್ಯಕ್ರಮದಲ್ಲಿ ಜ್ಞಾನಭಾರತಿ ಹೈಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿದರು.ಶಾಲೆಯ ವತಿಯಿಂದ ವಿವಿಧ ಪ್ರಶಸ್ತಿಗಳು ಲಭಿಸಿವೆ.ಫಾತಿಮಾ ಶನು ಮ್ ಅವರು ತಮ್ಮ ಇಂಗ್ಲೀಷ್ ಭಾಷಣ ದ್ವೀತೀಯ ಬಹುಮಾನವನ್ನು ಪಡೆದಿದ್ದಾರೆ.ಶ ಕವ್ವಾಲಿ ಟೀಮ್ ಎರಡನೇ ಬಹುಮಾನ ಪಡೆದಿದೆ. ತಂಡದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಎಂ. ಝಯೀದ್, ಶಹಾನಾಕಿಲ್, ಎಂ. ಎಚ್. ಶಮ್ಮಾಸ್, ಸಿಮಾಕ್, ಮುಹಮ್ಮದ್ ರಾ ಫಿ ಮತ್ತು 10ನೇ ತರಗತಿಯ ಮುಹಮ್ಮದ್ ಅಝೀಮ್ ಇದ್ದಾರೆ.ಶಾಲೆಯ ಆಡಳಿತ ಮಂಡಳಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಶಾಲಾ ಅಧಿಕಾರಿಗಳು ಪ್ರಕಟಣೆಯಲ್ಲಿ, “ಜ್ಞಾನಭಾರತಿ ಹೈಸ್ಕೂಲ್ ಸಮುದಾಯ, ಆಡಳಿತ ಮಂಡಳಿ, ಶಿಕ್ಷಣ ಸಿಬ್ಬಂದಿ, ಪಿಟಿಎ ಸಮಿತಿ ಹಾಗೂ ಪೋಷಕರು ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನವನ್ನು ನೋಡಿ ಶುಭ ಹಾರೈಸಿದ್ದಾರೆ. ಅವರ ಯಶಸ್ಸು ಅವರು ತೊಡಗಿಕೊಂಡ ಶ್ರದ್ದೆ ಮತ್ತು ಪರಿಶ್ರಮ ಮತ್ತು ಪ್ರತಿಭೆಯ ಫಲವಾಗಿದೆ,” ಎಂದು ಹೇಳಿದ್ದಾರೆ.ಪ್ರತಿಭಾ ಕರಂಜಿ ಯೋಜನೆ ರಾಜ್ಯ ಸರಕಾರದಿಂದ ಆರಂಭವಾಗಿದೆ, ಶಾಲಾ ಮಕ್ಕಳಲ್ಲಿ ಕಲಾ ಮತ್ತು ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶವಾಗಿದೆ ಎಂದು ಶಾಲಾ ಪ್ರಾಂಶುಪಾಲರು ಇಬ್ರಾಹಿಂ ಕಲೀಲ್ ತಿಳಿಸಿದರು
Home Uncategorized “ಪ್ರತಿಭಾ ಕರಂಜಿಯಲ್ಲಿ ಜ್ಞಾನಭಾರತಿಯ ಮಿಂಚು: ಇಂಗ್ಲಿಷ್ ಭಾಷಣ ಹಾಗೂ ಕವ್ವಾಲಿಯಲ್ಲಿ ದ್ವೀತೀಯ ಸ್ಥಾನ”

