ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಣೆ

0
21

ಬೆಂಗಳೂರು: ಕರ್ನಾಟಕದಾದ್ಯಂತ ಮಳೆ ಮತ್ತೆ ಚುರುಕುಗೊಂಡಿದೆ, ಕೇವಲ ಕರಾವಳಿ ಜಿಲ್ಲೆಗಳಷ್ಟೇ ಅಲ್ಲದೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ಕೋಲಾರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್​ಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯಪುರ, ಮಂಕಿ, ಲಕ್ಷ್ಮೇಶ್ವರ, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಅಂಕೋಲಾ, ಕದ್ರಾ, ಶಿರಹಟ್ಟಿ, ತಾವರಗೇರಾ, ಬೀದರ್, ಹುನಗುಂದ, ಬೆಳ್ಳಟ್ಟಿ, ದೇವರಹಿಪ್ಪರಗಿ, ಲೋಕಾಪುರ, ಗುಳೇಗೋಡು,ರಾಂಪುರ, ಬಾಳೆಹೊನ್ನೂರು, ಕಳಸ, ಬೆಳ್ಳೂರು, ಹಗರಿಬೊಮ್ಮನಹಳ್ಳಿ, ಹಿರಿಯೂರು, ಜಯಪುರದಲ್ಲಿ ಹೆಚ್ಚು ಮಳೆಯಾಗಿದೆ.

ಕಾರ್ಕಳ, ಕುಮಟಾ, ಇಂಡಿ, ಝಲ್ಕಿ, ನಲ್ವತವಾಡ, ಮೂಡುಬಿದಿರೆ, ಧರ್ಮಸ್ಥಳ, ಉಡುಪಿ, ಪುತ್ತೂರು, ಮುದ್ದೇಬಿಹಾಳ, ಶಿಗ್ಗಾಂವ್, ಸವಣೂರು, ಸಿಂದಗಿ, ಸೈದಾಪುರ, ಕೆರೂರು, ಇಳಕಲ್, ಕುರ್ಡಿ, ಬೆಂಗಳೂರು ಕೆಐಎಎಲ್​, ಹೊಳಲ್ಕೆರೆ, ಕಮ್ಮರಡಿ, ನಾಗಮಂಗಲ, ಶೃಂಗೇರಿ, ಮೈಸೂರು, ಹೊಸದುರ್ಗಾ, ಕೊಟ್ಟಿಗೆಹಾರ, ವೈಎನ್ ಹೊಸಕೋಟೆ, ಚಿಟಗುಪ್ಪ, ಆಲಮಟ್ಟಿ, ನರಗುಂದ, ರೋಣದಲ್ಲಿ ಮಳೆಯಾಗಿದೆ.

ಹಿಡಕಲ್, ಕಿಬ್ಬನಹಳ್ಳಿ, ಭಾಗಮಂಡಲ, ಬಂಟವಾಳ, ಗೋಕರ್ಣ, ಮಂಗಳೂರು, ಮುಲ್ಕಿ, ಅಥಣಿ, ಬನವಾಸಿ, ಜಾಲಹಳ್ಳಿ, ಅಣ್ಣಿಗೆರೆ, ಬಸವನ ಬಾಗೇವಾಡಿ, ಹುಕ್ಕೇರಿ, ಎನ್​​ಆರ್​ ಪುರ, ಚಿಕ್ಕಬಳ್ಳಾಪುರ, ಬಾದಾಮಿ, ಮುದಗಲ್,ಕುಂದಗೋಳ, ಬೇಗೂರು, ಪೊನ್ನಂಪೇಟೆ, ಹೊನ್ನಾಳಿ, ಬೇಗೂರು, ಜೋಯ್ಡಾ, ಯಲಬುರ್ಗಾ, ಯಲ್ಲಾಪುರ, ಬಿಳಗಿ, ಬಂಡೀಪುರ, ಮಂಠಾಳ, ಭರಮಸಾಗರ, ಹುಂಚದಕಟ್ಟೆ, ಭದ್ರಾವತಿ, ಎಂಎಂ ಹಿಲ್ಸ್​, ತ್ಯಾಗರ್ತಿ, ಚನ್ನರಾಯಪಟ್ಟಣ, ಕೋಲಾರ, ಚಾಮರಾಜನಗರ, ತರೀಕೆರೆ, ಪರಶುರಾಂಪುರ, ಅರಕಲಗೂಡಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದ ಬೆಳಗ್ಗೆವರೆಗೂ ಮಳೆಯಾಗಿದೆ. ಎಚ್​ಎಎಲ್​ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​​ನಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

LEAVE A REPLY

Please enter your comment!
Please enter your name here