ಹೆಬ್ರಿ: ಕಂದಾಯ ಇಲಾಖೆಯ ಗ್ರಾಮ ಸಹಾಯಕ ವಿಜಯ್ ಕುಮಾರ್ ಇವರಿಗೆ ಅವರ ಕೆಲಸದ ಕಾರಣ ಹಲವಾರು ಪ್ರದೇಶಗಳಿಗೆ ಓಡಾಡಬೇಕಾಗುದರಿಂದ ಅವರಿಗೆ ಅನುಕೂಲವಾಗಲೆಂದು ಹೆಬ್ರಿ ಗ್ರಾಮ ಪಂಚಾಯತ್ ಗಿಲ್ಲಾಳಿ ವಾರ್ಡ್ ಸದಸ್ಯರಾದ ಹೆಚ್.ಜನಾರ್ದನ್ ಮತ್ತು ಸಂತೋಷ್ ನಾಯಕ್ ಇವರ ಮಾಸಿಕ ಗೌರವಧನದಿಂದ ಸೈಕಲ್ ಕೊಡುಗೆ ನೀಡಿರುತ್ತಾರೆ.

ಸೈಕಲನ್ನು ಹಿರಿಯರಾದ ಹೆಬ್ರಿ ಭಾಸ್ಕರ್ ಜೋಯಿಸ್ ಇವರಿಂದ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ವಿತರಿಸಲಾಯಿತು, ಈ ಸಂದರ್ಭದಲ್ಲಿ ಹಿರಿಯರಾದ ಪ್ರಕಾಶ್ ಮಲ್ಯ ನಾರಾಯಣ ನಾಯ್ಕ್ ಉಪಸ್ಥಿತರಿದ್ದರು

