ಆರದಿರಲಿ ಬದುಕು ಆರಾಧನ ತಂಡದ ಫೆಭ್ರವರಿ ತಿಂಗಳ 107ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಚಂದ್ರಾವತಿ ಅವರು ಶ್ವಾಸ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಮಂಗಳೂರಿನ ಕೆ. ಎಂ.ಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯಲ್ಲಿ ದುಡಿಯುವ ಗಂಡಸರು ಯಾರು ಇಲ್ಲದೆ ಕಡುಬಡವರಾದ ಇವರ ಕಷ್ಟ ಅರಿತ ನಮ್ಮ ತಂಡದ ಸಹಾಯ ಹಸ್ತ ವನ್ನು ಅವರ ಮನೆಗೆ ಬೇಟಿ ನೀಡಿ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ಸತೀಶ್ ನಾಯ್ಕ್ ಎಡಪದವು ದೀನ್ ರಾಜ್ ಕೆ ಬಸವರಾಜ ಮಂತ್ರಿ ಗಣೇಶ್ ಪೈ ಬಾಸ್ಕರ ದೇವಾಡಿಗ ,ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ,ನಿಲೇಶ್ ಕಟೀಲು ಪ್ರವೀಣ್ ಬಂಗೇರ ಅರುಣ್ ಅಜೆಕಾರ್ ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್, ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.

