ಮೂಡುಬಿದಿರೆಯ ಶ್ರೀ ಮಹಾವೀರಕಾಲೇಜಿನ ಹಿಂದಿ ವಿಭಾಗದ ವತಿಯಿಂದಏರ್ಪಡಿಸಲಾಗಿದ್ದ ಹಿಂದಿ ದಿನಾಚರಣೆಯ ಸಂದರ್ಭದಲ್ಲಿ ಭುವನೇಂದ್ರಕಾಲೇಜಿನ ನಿವೃತ್ತ ಸಹಪ್ರಾಧ್ಯಾಪಕರು ಹಾಗೂ ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ.ನಾಗಭೂಷಣ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ, ವಿವಿಧ ಭಾಷೆಕಲಿಯುವುದ್ದರಿಂದಜ್ಞಾನದಅಭಿವೃದ್ಧಿಆಗುತ್ತದೆ.ಭಾಷೆಯನ್ನು ಮಾತನಾಡಿದರೆ ಮಾತ್ರಎಲ್ಲಾಜನರಜೊತೆ ಬೆರೆಯಲು ಸಾಧ್ಯ.ಭಾಷೆತಿಲಿಯದೆ ಹೋದಲ್ಲಿ ಸಂಜ್ಞೆಯ ಮುಖಾಂತರ ಮಾತನಾಡುವ ಪರಿಸ್ಥಿತಿ ಬರಬಹುದು.ದೇಶದ ಹಲವೆಡೆ ಹಿಂದಿ ಮಾತನಾಡುವಜನರಿದ್ದಾರೆ.ಹಿಂದಿ ಭಾಷೆಯನ್ನುಅಭಿಮಾನದಿಂದಎಲ್ಲರೂ ಸ್ವೀಕರಿಸಬೇಕು.ಎಲ್ಲಾ ಭಾಷೆಗಳು ಸಮಾನವಾಗಿರುತ್ತದೆ, ಹಿಂದಿ ಭಾಷೆಕಲಿತರೆಅದು ವ್ಯಕ್ತಿಯನ್ನುಎಲ್ಲಾ ಸಂದರ್ಭದಲ್ಲಿಯೂರಕ್ಷಿಸುತ್ತದೆ.ಹಿAದಿ ಬಗ್ಗೆ ಅಭಿಮಾನ ಹಾಗೂ ಅಭಿರುಚಿಅತ್ಯಗತ್ಯಎಂದು ತಿಳಿಸಿದರು.ಮಹಾವೀರ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಲೆಫ್ಟಿನೆಂಟ್ ವಿಜಯಲಕ್ಷಿ÷್ಮ ಮಾತನಾಡಿ, ಹಿಂದಿ ಬಹಳ ಸರಳವಾದ, ಮಧುರವಾದ ಭಾಷೆಯಾಗಿದೆಎಂದು ತಿಳಿಸಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಪ್ರೊ.ನಾಗಭೂಷಣ್ಅವರಿಗೆ ಸನ್ಮಾನಿಸಲಾಯಿತು ಹಾಗೂ ಹಿಂದಿ ವಿಭಾಗದಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಹಿಂದಿ ವಿಭಾಗ ಮುಖ್ಯಸ್ಥೆ ಶಾರದಾ, ಉಪನ್ಯಾಸಕಿ ರಶ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತಿಷ್ಠ ಸ್ವಾಗತಿಸಿ, ಶ್ರೇಷ್ಠ ವಂದಿಸಿದರು.ಐಶ್ವರ್ಯಅತಿಥಿ ಪರಿಚಯ ಮಾಡಿದರು.ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.