ದಿನಾಂಕ 30/10/2025 ಗುರುವಾರದಂದು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ದೊಡ್ಡಣಗುಡ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಉಡುಪಿ. ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಉಡುಪಿ ತಾಲೂಕು ಇದರ ಆಶ್ರಯದಲ್ಲಿ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಇಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅನಿಲ್ ಕುಮಾರ್ ಎಂ ಎನ್ ಅಧ್ಯಕ್ಷರು ಮನೋ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಡಾ ಪಿ.ವಿ ಭಂಡಾರಿ ವೈದ್ಯಕೀಯ ನಿರ್ದೇಶಕರು ಡಾ. ಎ.ವಿ ಬಾಳಿಗ ಸಮೂಹ ಸಂಸ್ಥೆಗಳು ದೊಡ್ಡಣ ಗುಡ್ಡೆ,ಡಾ. ಅಶೋಕ್ ಕುಮಾರ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಮತ್ತು ಮಕ್ಕಳ ತಜ್ಞರು ಕೆ.ಎಂ.ಸಿ ಮಣಿಪಾಲ,ಶ್ರೀ ಪ್ರಸನ್ನ ಕುಮಾರ್ ಭಾರತೀಯ ಜೈನ್ ಮಿಲನ್, ನಾಗರಾಜ್ ಶೆಟ್ಟಿ, ನಿರ್ದೇಶಕರು SKDRDP ಉಡುಪಿ ಜಿಲ್ಲೆ. ಪ್ರಭಾಕರ್ ಪೂಜಾರಿ, ಅಧ್ಯಕ್ಷರು ನಗರಸಭೆ ಉಡುಪಿ. ನೀರೇ ಕೃಷ್ಣಶೆಟ್ಟಿ ಅಧ್ಯಕ್ಷರು ಜಿಲ್ಲಾ ಜನಜಾಗ್ರತಿ ವೇದಿಕೆ ಉಡುಪಿ.
ಸುಂದರ್ ಜೆ ಕಲ್ಮಾಡಿ ಅಧ್ಯಕ್ಷರು ಸ್ಥಾಯಿ ಸಮಿತಿ ನಗರಸಭೆ ಉಡುಪಿ,
ಸತ್ಯಾನಂದ ನಾಯಕ್ ಅಧ್ಯಕ್ಷರು ತಾಲೂಕು ಜನಜಾಗತಿ ವೇದಿಕೆ ಉಡುಪಿ. ಜಿಲ್ಲಾ ಜನಜಾಗ್ರತಿ ವೇದಿಕೆ ಉಡುಪಿಯ ಸದಸ್ಯರಾದ ಮಹಾಬಲ ಶೆಟ್ಟಿಉಡುಪಿ, ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಡುಪಿ ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸುರೇಂದ್ರ ನಾಯಕ್ ಸ್ವಾಗತಿಸಿ. ಮೇಲ್ವಿಚಾರಕರಾದ ಶ್ರೀ ಬಾಲಚಂದ್ರ ನಿರೂಪಿಸಿ ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ನಿತೇಶ್ ವ0ದಿಸಿದರು,ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶಂಕರ್ ಕುಲಾಲ್ ಪೆರಂಪಳ್ಳಿ , ಅಧ್ಯಕ್ಷರು 2000ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ರವರು ವಹಿಸಿದ್ದರು

