ಉಡುಪಿ ಶಿರಿಬೀಡು ವಾರ್ಡಿನ ಪ್ರಗತಿ ನಗರ ಸರ್ಕಲ್ ನಲ್ಲಿ ನೂತನವಾಗಿ ಅಳವಡಿಸಿದ ಹೈ ಮಾಸ್ಟ್ ದೀಪದ ಉದ್ಘಾಟನೆ ಯನ್ನು ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ಇವರು ನೆರವೇರಿಸಿದರು. ಶಿರಿಬೀಡು ವಾರ್ಡಿನ ನಗರಸಭಾ ಸದಸ್ಯರಾದ ಶ್ರೀ ಟಿ. ಜಿ. ಹೆಗ್ಡೆ ಹಾಗೂ ಪ್ರಗತಿನಗರ ನಾಗರಿಕ ಸಮಿತಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿ , ಪಕ್ಷದ ಹಿರಿಯ ಕಾರ್ಯಕರ್ತರು, ಪ್ರಗತಿ ನಗರ ಪರಿಸರದ ಗ್ರಾಮಸ್ಥರು ಉಪಸ್ಥಿತರಿದ್ದರು.